ಬಸವರಾಜ ಹೊರಟ್ಟಿಯವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ಐದು ದಶಕಗಳಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತ, ಅವರ ಬಾಳಲ್ಲಿ ಬೆಳಕು ಮೂಡಿಸಿದ, ನಾಡಿನ ಅತ್ಯಂತ ಹಿರಿಯ ಸದಸ್ಯರೆಂದೇ ಖ್ಯಾತಿ ಹೊಂದಿದ ಮತ್ತು 1980ರಿಂದ ಸತತ 8 ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ 45 ವರ್ಷಗಳಿಂದ ವಿಧಾನಪರಿಷತ್ತಿನಲ್ಲಿ ತಮ್ಮ ಸುದೀರ್ಘ ಸದನದ ಪಯಣದಲ್ಲಿ ಸಾಗುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕುರಿತು ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ರವರು ನಿರ್ಮಿಸಿದ ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಡಾ.ಬಸವರಾಜ ಧಾರವಾಡ ತಿಳಿಸಿದ್ದಾರೆ.

Advertisement

ಜೂನ್ 16ರಂದು ಬೆಳಿಗ್ಗೆ 9.30 ಗಂಟೆಗೆ ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಘನ ಅಧ್ಯಕ್ಷತೆಯನ್ನು ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ವಹಿಸಲಿದ್ದಾರೆ. ಬಳ್ಳಾರಿ ನಗರ ಶಾಸಕ ಎನ್.ಭರತರಡ್ಡಿ ಹಾಗೂ ಬಿ.ಪಿ.ಎಸ್.ಸಿ ಸಂಸ್ಥೆಯ ಅಧ್ಯಕ್ಷರಾದ ಡಾ.ಮಹಿಮಾ ಪಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಿಕ್ಷಕರೊಬ್ಬರು 3ನೇ ಬಾರಿ ಸಭಾಪತಿಯಾಗುವ ಮೂಲಕ ಸದನದ ಘನತೆ ಹೆಚ್ಚಿಸಿದ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸಂಸದೀಯ ಪಯಣದ ಕುರಿತು ಈಗಾಗಲೇ ಸದನದಲ್ಲಿ ಹೊರಟ್ಟಿ ಭಾಗ-1, ಭಾಗ-2, ಅಭಿನಂದನಾ ಗ್ರಂಥಗಳಾದ ‘ದಿಟ್ಟ ಹೆಜ್ಜೆ’, ‘ಮೈಲುಗಲ್ಲುಗಳೇ ಮಾತನಾಡುತ್ತವೆ’, ‘ಬಸವರಾಜ ಪಥ’ ಹಾಗೂ ಎರಡು ಎಂ.ಫಿಲ್ ಸಂಶೋಧನಾ ಗ್ರಂಥಗಳಿಗೆ ಬಸವರಾಜ ಹೊರಟ್ಟಿಯವರ ಸಾರ್ವಜನಿಕ ಬದುಕಿನ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ ಸೋಲಿಲ್ಲದ ಸರದಾರ ಹೊರಟ್ಟಿಯವರ ಕುರಿತು ಸಾಕ್ಷ್ಯಚಿತ್ರ ಭಾಗ-1ನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಿದೆ. ಸಾಕ್ಷ್ಯಚಿತ್ರದ ಎರಡನೇ ಭಾಗವನ್ನು ಜೂ.16ರಂದು ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸುವ ಮೂಲಕ ಅವರೆಲ್ಲ ಹಿತೈಷಿಗಳಿಗೆ ಅಭಿಮಾನಿಗಳಿಗೆ ಶಿಕ್ಷಕ ಸಮೂಹಕ್ಕೆ ಖುಷಿ ನೀಡಲಿದ್ದಾರೆ ಎಂದು ಅನ್ನಪೂರ್ಣ ಕ್ರಿಯೇಶನ್ಸ್ ನಿರ್ದೇಶಕ ಸಿರಿಗೇರಿ ಯರಿಸ್ವಾಮಿಯವರು ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here