HomeEntertainmentಡಾಲಿ ಧನಂಜಯ್ ಹೊಸ ಇನಿಂಗ್ಸ್: ನಿರ್ಮಾಪಕನಾಗಿ ‘ಹೆಗ್ಗಣ ಮುದ್ದು’ ಘೋಷಣೆ

ಡಾಲಿ ಧನಂಜಯ್ ಹೊಸ ಇನಿಂಗ್ಸ್: ನಿರ್ಮಾಪಕನಾಗಿ ‘ಹೆಗ್ಗಣ ಮುದ್ದು’ ಘೋಷಣೆ

For Dai;y Updates Join Our whatsapp Group

Spread the love

ಡಾಲಿ ಧನಂಜಯ್ ಮದುವೆಯಾದ ಬಳಿಕ ನಾಯಕನಾಗಿ ತೆರೆಮೇಲೆ ಕಾಣೆಯಾಗಿದ್ದಾರೆ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ಹೆಚ್ಚಾಗಿದೆ. ವಾಸ್ತವವಾಗಿ, ಡಾಲಿ ನಾಯಕನಾಗಿ ನಟಿಸಿದ ಕೊನೆಯ ಕನ್ನಡ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದೆ. ಅವರು ಈಗ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಯಾವ ಚಿತ್ರವೂ ಇನ್ನೂ ಬಿಡುಗಡೆಯ ಹಂತ ತಲುಪಿಲ್ಲ.

ಈ ಹಿನ್ನಲೆಯಲ್ಲಿ ಡಾಲಿ ಧನಂಜಯ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಈ ಬಾರಿ ಅವರು ನಟನಾಗಿ ಅಲ್ಲ, ನಿರ್ಮಾಪಕನಾಗಿ ಮುಂದಾಗಿದ್ದಾರೆ. ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಮೂಲಕ ಈಗಾಗಲೇ ವಿಭಿನ್ನ ಹಾಗೂ ಕಥಾ ಪ್ರಧಾನ ಸಿನಿಮಾಗಳನ್ನು ನಿರ್ಮಿಸಿರುವ ಡಾಲಿ, ಮತ್ತೆ ಅದೇ ಹಾದಿಯಲ್ಲಿ ಸಾಗಿದ್ದಾರೆ.

ಡಾಲಿ ಪಿಕ್ಚರ್ಸ್‌ನ ಸಿನಿಮಾಗಳು ಮಾಸ್ ಅಥವಾ ಕಮರ್ಷಿಯಲ್ ಸೂತ್ರಗಳಿಗೆ ಸೀಮಿತವಾಗದೆ, ಸಾಮಾನ್ಯ ಪ್ರೇಕ್ಷಕರಿಗೆ ತಟ್ಟುವ ಕಥೆಗಳಿಗೆ ಆದ್ಯತೆ ನೀಡುತ್ತಿವೆ. ಜೊತೆಗೆ ಹೊಸ ನಿರ್ದೇಶಕರು, ಹೊಸ ಕಲಾವಿದರಿಗೆ ವೇದಿಕೆ ನೀಡುತ್ತಿರುವುದು ಈ ಸಂಸ್ಥೆಯ ಮತ್ತೊಂದು ವಿಶೇಷತೆ.

ಇದೀಗ ಡಾಲಿ ಪಿಕ್ಚರ್ಸ್‌ನಿಂದ ‘ಹೆಗ್ಗಣ ಮುದ್ದು’ ಹೆಸರಿನ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಡಾಲಿಯ ಆಪ್ತ ಮಿತ್ರ ಮೈಸೂರು ಪೂರ್ಣ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಂಡಿದ್ದಾರೆ. ‘ವೇದ’ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ಅದಿತಿ ಸಾಗರ್‌ಗೆ ಇದು ಮತ್ತೊಂದು ಪ್ರಮುಖ ಅವಕಾಶವಾಗಿದೆ.

‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಿಂದ ಪ್ರೇರಣೆ ಪಡೆದ ಈ ಸಿನಿಮಾದಲ್ಲಿ, ವ್ಯಕ್ತಿಯ ಅಂತರಂಗದ ಮೌಲ್ಯಗಳನ್ನು ಪ್ರಶ್ನಿಸುವ ಕಥಾಹಂದರ ಇದೆ. ಕುದುರೆಯೋ ಅಥವಾ ಹೆಗ್ಗಣವೋ ಎಂಬ ಜಿಜ್ಞಾಸೆಯೇ ಸಿನಿಮಾದ ಕೇಂದ್ರಬಿಂದು. ಅವಿನಾಶ್ ಬಳೆಕ್ಕಳ ನಿರ್ದೇಶನ ಮಾಡಿರುವ ಈ ಚಿತ್ರ, ಅವರ ಮೊದಲ ನಿರ್ದೇಶನದ ಪ್ರಯತ್ನವಾಗಿದೆ.

ಚಿತ್ರೀಕರಣ ಬಹುತೇಕ ಮುಗಿದಿದ್ದು, ‘ಹೆಗ್ಗಣ ಮುದ್ದು’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಡಾಲಿ ಧನಂಜಯ್ ನಿರ್ಮಾಣದ ಆರನೇ ಸಿನಿಮಾ. ತಮ್ಮ ನಿರ್ಮಾಣದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿರುವ ಡಾಲಿ, ಈ ಸಿನಿಮಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತ ನಟನಾಗಿ ಡಾಲಿ ‘ಜಿಂಗೊ’, ‘ಹಲಗಲಿ’, ‘ಅಣ್ಣ ಫ್ರಂ ಮೆಕ್ಸಿಕೊ’, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಮತ್ತು ‘ಉತ್ತರಕಾಂಡ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!