ವಿಜಯಸಾಕ್ಷಿ ಸುದ್ದಿ, ಗದಗ : ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ಗದಗ ನಗರದ ಕಳಸಾಪುರ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಶ್ರೀ ರಾಣಿ ಚನ್ನಮ್ಮ ಭವನದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗದಗ ನಗರದ ಉದ್ಯಮಿಗಳು ಹಾಗೂ ಸಮಾಜದ ಯುವ ಮುಖಂಡರಾದ ವೀರಣ್ಣ ಮೇಟಿಯವರು ಸಮಾಜ ಸಂಘಟನೆಗಾಗಿ ತಮ್ಮ ಸ್ವ ಇಚ್ಛೆಯಿಂದ ಐದು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡುವ ಮೂಲಕ ಟ್ರಸ್ಟಿನ ನೂತನ ಸದಸ್ಯರಾಗಿ ಸೇರ್ಪಡೆಯಾದರು.
ಈ ಹಿನ್ನೆಲೆಯಲ್ಲಿ ಟ್ರಸ್ಟ್ನ ಎಲ್ಲಾ ಸದಸ್ಯರು ಅವರ ನಿವಾಸಕ್ಕೆ ತೆರಳಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೀರಣ್ಣ ಮೇಟಿ, ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ ನಾವು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿ ಈ ದೇಣಿಗೆಯನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭವಾಗಲಿ ಹಾಗೂ ಶ್ರೀ ರಾಣಿ ಚನ್ನಮ್ಮ ಭವನ ನಿರ್ಮಾಣ ಮಾಡುವ ಕಾಮಗಾರಿಗೆ ಹೆಚ್ಚಿನ ದೇಣಿಗೆಯನ್ನು ಕೊಡಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಮೋಹನ ಮಾಳಶೆಟ್ಟಿ, ಹಿರಿಯರಾದ ಶಾಂತಣ್ಣ ಮುಳವಾಡ, ಟ್ರಸ್ಟಿನ ಸದಸ್ಯರಾದ ಅನಿಲ ಪಾಟೀಲ, ಅಶೋಕ ಸಂಕಣ್ಣವರ, ಸಿದ್ಧಲಿಂಗೇಶ್ವರ ಕರಬಿಸ್ಟಿ, ಮಾಲತೇಶ ಹಿರೇಮನಿಪಾಟೀಲ, ಸಿದ್ದನಗೌಡ ಪಾಟೀಲ, ವಿಶ್ವನಾಥ್ ಹಳ್ಳಿಕೇರಿ, ಶಿವರಾಜಗೌಡ ಹಿರೇಮನಿಪಾಟೀಲ, ಶರಣು ಬೋಳನವರ, ಸಂಗಮೇಶ್ ಕವಳಿಕಾಯಿ ಮುಂತಾದವರಿದ್ದರು.