ಶ್ರೀ ರಾಣಿ ಚನ್ನಮ್ಮ ಭವನದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ

0
Donation for construction of Sri Rani Channamma Bhavan
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಗರದ ಕಳಸಾಪುರ ರಸ್ತೆಯಲ್ಲಿ ಶ್ರೀ ರಾಣಿ ಚನ್ನಮ್ಮ ಭವನದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಉದ್ದೇಶಿಸಲಾಗಿದ್ದು, ಟ್ರಸ್ಟ್ನ ಸದಸ್ಯರು ಸಮಾಜದ ಮುಖಂಡರಾದ ರಾಮನಗೌಡ ದಾನಪ್ಪಗೌಡ್ರ ನಿವಾಸಕ್ಕೆ ತೆರಳಿ ಈ ಬಗ್ಗೆ ಚರ್ಚಿಸಿದರು.

Advertisement

ಸಮಾಜ ಸಂಘಟನೆಗಾಗಿ ತಮ್ಮ ಸ್ವಇಚ್ಛೆಯಿಂದ 5 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್‌ನ್ನು ಟ್ರಸ್ಟಿನ ಸದಸ್ಯರಿಗೆ ಹಸ್ತಾಂತರಿಸಿ ಮಾತನಾಡಿದ ರಾಮನಗೌಡ ದಾನಪ್ಪಗೌಡ್ರ, ಪಂಚಮಸಾಲಿ ಸಮಾಜದಲ್ಲಿ ಹುಟ್ಟಿದ ನಾವು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿ ಈ ದೇಣಿಗೆಯನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭವಾಗಲಿ. ಮುಖಂಡರನ್ನು ಸಂಪರ್ಕಿಸಿ ಭವನ ನಿರ್ಮಾಣ ಕಾಮಗಾರಿಗೆ ಹೆಚ್ಚಿನ ದೇಣಿಗೆಯನ್ನು ಕೊಡಿಸುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಶಾಂತಣ್ಣ ಮುಳವಾಡ, ಸಿದ್ಧಲಿಂಗೇಶ್ವರ ಕರಬಿಸ್ಟಿ, ಸಿದ್ದನಗೌಡ ಪಾಟೀಲ, ವಿಶ್ವನಾಥ್ ಹಳ್ಳಿಕೇರಿ, ಶಿವರಾಜಗೌಡ ಹಿರೇಮನಿ ಪಾಟೀಲ, ಸಂಗಮೇಶ್ ಕವಳಿಕಾಯಿ ಮುಂತಾದವರು ದಾನಪ್ಪಗೌಡ್ರ ದಂಪತಿಗಳನ್ನು ಗೌರವಿಸಿ ಶುಭ ಹಾರೈಸಿದರು.


Spread the love

LEAVE A REPLY

Please enter your comment!
Please enter your name here