ವಿಜಯಸಾಕ್ಷಿ ಸುದ್ದಿ, ಗದಗ: ನಿಮ್ಮೆಲ್ಲರ ಒಗ್ಗಟ್ಟಿನಿಂದ ಭಕ್ತಿಯ ಜೊತೆಗೆ ಶಕ್ತಿ ಕೇಂದ್ರವಾಗಿ ಬೆಳೆಯಲಿ ಎಂದು ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಆಶಿಸಿದರು.
ಅವರು ನಗರದ ಸಂಭಾಪೂರ ರಸ್ತೆಯ ಕೆ.ಇ.ಬಿ ಗ್ರಿಡ್ ಹಿಂದುಗಡೆ ಬಡಾವಣೆಯಲ್ಲಿ ಶ್ರೀ ರೇಣುಕಾದೇವಿ ಪ್ರತ್ಯಂಗಿರಾದೇವಿ ಟ್ರಸ್ಟ್ ಗದಗ-ಬೆಟಗೇರಿ ಇವರ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾದೇವಿ ಹಾಗೂ ಶ್ರೀ ಪ್ರತ್ಯಂಗಿರಾದೇವಿ ಉಭಯ ದೇವಸ್ಥಾನಗಳ ಭೂಮಿಪೂಜಾ ನೆರವೇರಿಸಿ ಮಾತನಾಡಿದರು.
ಎಲ್ಲರ ಜೀವನದಲ್ಲಿ ದೇವಿಯ ಶಕ್ತಿಯ ಅನುಭವವಾಗಿರುತ್ತದೆ. ಎಲ್ಲರೂ ದೇವಸ್ಥಾನದ ಕೆಲಸದಲ್ಲಿ ರಾಜಕೀಯ ಮಾಡದೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಿರೀಕ್ಷೆಗೂ ಮೀರಿ ಕೆಲಸವಾಗುತ್ತದೆ. ಕೂಡಲೇ ದೇವಸ್ಥಾನದ ಕಟ್ಟಡದ ನಿರ್ಮಾಣ ಕಾರ್ಯ ಪ್ರಾರಂಭದ ಜೊತೆಗೆ ಸಮ ಸಮಾಜದ ನಿರ್ಮಾಣವಾಗಬೇಕಾಗಿದೆ ಎಂದರು.
ನಗರಸಭೆಯ ಮಾಜಿ ಅಧ್ಯಕ್ಷ ಫೀರಸಾಬ ಕೌತಾಳ ಮಾತನಾಡಿ, ದೇವನೊಬ್ಬ ನಾಮ ಹಲವು. ಎಲ್ಲರೂ ಒಟ್ಟಾಗಿ ಸಹೋದರತೆಯಿಂದ ಬಾಳಿ ಬದುಕಿದಾಗ ಮಾತ್ರ ಈ ಮಾನವ ಜನ್ಮ ಸಾರ್ಥಕವಾಗುವದು. ನಿಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವದಾಗಿ ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ದೇವಸ್ಥಾನದ ಕಟ್ಟಡದ ನಿರ್ಮಾಣಕ್ಕೆ ಅನುದಾನವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಯುವ ಮುಖಂಡ ಅಮರೇಶ ಬೆಟಗೇರಿ, ಹನಮಂತ ವೀರಾಪೂರ, ಶ್ರೀ ರೇಣುಕಾದೇವಿ ಪ್ರತ್ಯಂಗಿರಾದೇವಿ ಟ್ರಸ್ಟ್ನ ಗೌರವ ಅಧ್ಯಕ್ಷರಾದ ಗದಿಗೆವ್ವ ಗುಡೇನಕಟ್ಟಿ, ಅಧ್ಯಕ್ಷರಾದ ಅನಿತಾ ಬಾಗಲಕೋಟಿ, ಉಪಾಧ್ಯಕ್ಷರಾದ ಮಂಜುಳಾ ಕುರಿ, ಕಾರ್ಯದರ್ಶಿ ಗಂಗವ್ವ ಚಕ್ರಣ್ಣವರ, ಸಹಕಾರ್ಯದರ್ಶಿ ರೇಖಾ ಬಾಗಲಕೋಟಿ, ಸಂಘಟನಾ ಕಾರ್ಯದರ್ಶಿ ಈರಮ್ಮ ಬಾಗಲಕೋಟಿ, ಖಜಾಂಚಿ ರೇಖಾ ಜಡಿಯವರ, ಶೈಲಾ ಬೆರಗೇರಿ, ತೇಜಸ್ವಿ ಬಾಗಲಕೋಟಿ ಮುಂತಾದವರು ಉಪಸ್ಥಿತರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಂಗಾ ಚಕ್ರಣ್ಣವರ ಸ್ವಾಗತಿಸಿದರು. ರೇಖಾ ಜಡಿಯವರ ವಂದಿಸಿದರು.



