ಬೆಳಗಾವಿ: ರಾಜಕಾರಣಿಗಳ ಹೆಸರಿನಲ್ಲಿ ಕರ್ನಾಟಕದ ಹೆಸರನ್ನು ಹಾಳು ಮಾಡುವುದು ಬೇಡ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಹೆಸರಿನಲ್ಲಿ ಕರ್ನಾಟಕದ ಹೆಸರನ್ನು ಹಾಳು ಮಾಡುವುದು ಬೇಡ. ಹೋರಾಟ ಮಾಡುವುದಾರೆ ಮಾಡಿ ಆದರೆ ಇಂಥ ಹೀನ ಕೃತ್ಯಮಾಡಿಸಿ ಬಲಿಪಶು ಮಾಡಬೇಡಿ ಎಂದು ಹೇಳಿದರು.
ಸಹೋದರ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹೀಗೆ ಆಯ್ತು. ಚರ್ಚೆಯಾಯಿತು, ತನಿಖೆಯಾಯಿತು. ಆದರೆ ಮಾಡಿದವರು ಯಾರು ಅಂತ ಬರಲಿಲ್ಲ. ಕೇವಲ ಇಬ್ಬರು ಮೂವರನ್ನು ಬಂಧಿಸಿದರು, ಆ ಪ್ರಕರಣದ ಹಿಂದೆ ಯಾರಿದ್ದರು ಎಂಬುದರ ಕುರಿತು ತಾರ್ಕಿಕ ಅಂತ್ಯ ಆಗಲಿಲ್ಲ ಎಂದು ತಿಳಿಸಿದರು.
ಗಂಭೀರ ಸಮಸ್ಯೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸೀರಿಯಸ್ ಆಗಿ ಅವರಾಗಿಯೇ ವರದಿ ತರಿಸಿಕೊಳ್ಳಬೇಕು. ರಾಜಣ್ಣ ಹನಿಟ್ರ್ಯಾಪ್ ಗಾಳಿಯಲ್ಲಿ ಹೇಳುವ ಮಾತಿಲ್ಲ, ತನಿಖೆಯಾಗಲಿ, ಸ್ಚಪಕ್ಷೀಯರು ಇರಬಹುದು ಬೇರೆ ಪಕ್ಷದವರು ಇರಬಹುದು. ಇವರೇ, ಅವರೇ ಎಂದು ಹೇಳಲು ಆಗುವುದಲ್ಲ ಎಂದರು.