ಮಹಿಳೆಯರಿಗೆ 2 ಸಾವಿರ ಹಣ ಬೇಡಾ ಬದಲಾಗಿ ಬಾಣಂತಿಯರ ಸಾವಿಗೆ ನ್ಯಾಯ ಕೊಡಿ‌: ಆರ್. ಅಶೋಕ್

0
Spread the love

ಬೆಂಗಳೂರು: ಮಹಿಳೆಯರಿಗೆ 2 ಸಾವಿರ ಹಣ ಬೇಡಾ ಬದಲಾಗಿ ಬಾಣಂತಿಯರ ಸಾವಿಗೆ ನ್ಯಾಯ ಕೊಡಿ‌ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಮೃತರ ಮನೆಗೆ ದಿನೇಶ್ ಗುಂಡೂರಾವ್ ಏಕೆ ಭೇಟಿ ಕೊಟ್ಟಿಲ್ಲ. ನಾನು ರಾಜೀನಾಮೆಗೆ ಸಿದ್ದ ಎಂದು ಹೇಳುವ ದಿನೇಶ್ ಗುಂಡೂರಾವ್ ಹೇಳಿಕೆ ನುಣುಚಿಕೊಳ್ಳುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಆರೋಗ್ಯ ಇಲಾಖೆ ಅನಾರೋಗ್ಯ ‌ಇಲಾಖೆಯಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಕಳಪೆ ಆಗಿದ್ದ ರಿಂಗರ್ ಲ್ಯಾಕ್ವೆಟ್ ದ್ರಾವಣ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ. 28 ಬಾಣಂತಿಯರು ಎಂಟು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮಹಿಳೆಯರಿಗೆ ಎರಡು ಸಾವಿರ ರೂಪಯಿ ಬೇಡಾ ಬದಲಾಗಿ ಸಾವಿಗೆ ನ್ಯಾಯ ಕೊಡಿ‌ ಎಂದರು.


Spread the love

LEAVE A REPLY

Please enter your comment!
Please enter your name here