ಕಲಬುರಗಿ:-ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ಪೊಲೀಸ್ ಕಾನ್ಸಟೇಬಲ್ ವಿರುದ್ದ ಪತ್ನಿಯಿಂದಲೇ ದೂರು ನೀಡಿದ ಘಟನೆ ಜರುಗಿದೆ.
ಪತ್ನಿಯ ದೂರಿನ ಅನ್ವಯ ಯಡ್ರಾಮಿ ಠಾಣೆಯಲ್ಲಿ ಕಾನ್ಸಟೇಬಲ್ ರೇವಣಸಿದ್ದಪ್ಪ ಕೆಂಚಗೊಂಡ ವಿರುದ್ದ FIR ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮದ ಜಗದೇವಿಯಿಂದ ದೂರು ದಾಖಲಾಗಿದೆ. ಮೂರು ವರ್ಷದ ಹಿಂದೆ ಜಗದೇವಿ ಅವರು ಸಿಂದಗಿ ತಾಲೂಕಿನ ಕಲಕೇರಿ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೇವಣಸಿದ್ದಪ್ಪನೊಂದಿಗೆ ಮದುವೆಯಾಗಿದ್ದರು.
ಮದುವೆ ಬಳಿಕ ನಿರಂತರ ಕಿರುಕುಳ ಹಿನ್ನಲೆ ಪತ್ನಿ ದೂರು ದಾಖಲು ಮಾಡಿದ್ದಾರೆ. ಎಷ್ಟೆ ಭಾರಿ ರಾಜಿ ಪಂಚಾಯಿ ತಿ ಮಾಡಿದ್ರು ಕಿರುಕುಳ ನಿಲ್ಲಿಸದ ಹಿನ್ನಲೆ, ಪತಿ ವಿರುದ್ದ ಪತ್ನಿ ಠಾಣೆಯ ಮೆಟ್ಟಿಲೇರುವ ಸ್ಥಿತಿ ಬಂದಿದೆ.
ಸಧ್ಯ ತವರು ಮನೆಯಲ್ಲಿರೋ ಜಗದೇವಿ,
ಪತಿಯ ವಿರುದ್ಧ FIR ದಾಖಲಿಸಿದ್ದಾರೆ. ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.