ಡಾ. ಅಂಬೇಡ್ಕರರು ದೇಶದ ಚೇತನ: ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಬಿ.ಆರ್. ಅಂಬೇಡ್ಕರರು ಸಂವಿಧಾನದ ಮೂಲಕ ಎಲ್ಲರ ಬದುಕಿಗೆ ಸರ್ವೋದಯದ ಬೆಳಕು ನೀಡಿ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ. ಅವರು ನಮಗೆ ಸದಾ ಚೇತನಶಕ್ತಿ. ಮಹಿಳೆಯರ ಸ್ವಾತಂತ್ರ್ಯಕ್ಕೆ ಭದ್ರವಾದ ಬುನಾದಿ ಹಾಕಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಅವರು ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರರ 134ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕ ಸಂಘಟನೆಗಳ ಪರವಾಗಿ ಸಂಚಾಲಕರಾದ ಎಚ್.ಸಿ. ಕೊಪ್ಪಳ ಹಾಗೂ ಶಾಂತಣ್ಣ ಮುಳವಾಡ ಸಚಿವರಿಗೆ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಪೀರಸಾಬ ಕೌತಾಳ ಸಂವಿಧಾನದ ಪೀಠಿಕೆಯ ಭಾವಚಿತ್ರವನ್ನು ಅನಾವರಣಗೊಳಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಮ್. ದೇವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಿ. ಅಸೂಟಿ, ಎಸ್.ಎನ್. ಬಳ್ಳಾರಿ, ಗಂಟಿ ಕಾರ್ಮಿಕ ಸಂಘಟನೆಯ ಮುಖಂಡ ಶಾಂತಣ್ಣ ಮುಳವಾಡ ಪಾಲ್ಗೊಂಡಿದ್ದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಎಚ್.ಸಿ. ಕೊಪ್ಪಳ, ಎಮ್.ಎಚ್. ಪೂಜಾರ, ಎಸ್.ಎಫ್. ಸಂಗಣ್ಣವರ, ಎಸ್.ಜಿ. ಗೋವಿಂದರಾಜು, ವೀಣಾ ಚವ್ಹಾಣ, ಲಕ್ಷ್ಮೀ ಕುಕನೂರ, ಶ್ರೀಮತಿ ಬದಾಮಿ, ಗೋಪಾಲ ರಾಯರ, ಬಿ.ಎ. ದೊಡ್ಡಮನಿ, ಪಿ.ವಿ. ರಾಮೇನಹಳ್ಳಿ, ಎ.ಕೆ. ಕರನಾಚಿ, ಜಿ.ಆರ್. ಹಾದಿ, ಎಸ್.ಎನ್. ಇಟಗಿ, ವಸಂತ ಬಿ.ಗದಗಿನ, ನಾಗರಾಜ ಬಳ್ಳಾರಿ, ಎಚ್.ವಾಯ್. ಪೂಜಾರ, ಎಂ.ಎಸ್. ನಾಯ್ಕರ, ಚಂದ್ರು ಚಲವಾದಿ, ದ್ವಾರಕೇಶ್ವರ ಮುಂತಾದವರು ಪಾಲ್ಗೊಂಡಿದ್ದರು.

ದಲಿತ ಕಲಾ ಮಂಡಳಿಯ ಅಧ್ಯಕ್ಷ ಶರೀಫ ಬಿಳೇಯಲಿ ತಂಡದವರು ಕ್ರಾಂತಿ ಗೀತೆಗಳನ್ನು ಹಾಡಿದರು. ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಾ ಎಸ್.ಕೆ. ಭಜಂತ್ರಿ ಇವರಿಂದ ನೃತ್ಯ ಪ್ರದರ್ಶನ ನಡೆಯಿತು. ಎಫ್.ಎಚ್. ಜಕ್ಕಪ್ಪನವರಿಗೆ ಹಾಗೂ ಮಾವಳ್ಳಿ ಶಂಕರರಿಗೆ ಸರ್ಕಾರ ಕೊಡಮಾಡುವ ಅಂಬೇಡ್ಕರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಕ್ಕೆ ರಸ್ತೆ ಸಾರಿಗೆ ಸಂಸ್ಥೆಯ ಪರವಾಗಿ ಎಚ್.ಸಿ. ಕೊಪ್ಪಳ ಸರ್ಕಾರಕ್ಕೆ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.


Spread the love

LEAVE A REPLY

Please enter your comment!
Please enter your name here