ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ 134ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ನಡೆದುಬಂದ ದಾರಿ ಹಾಗೂ ಭಾರತ ದೇಶಕ್ಕೆ ನೀಡಿದ ಕೊಡುಗೆಯ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ, ಪಕ್ಷದ ಪ್ರಮುಖರಾದ ಅಶೋಕ ಕುಡತಿನಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ಲಿಂಗರಾಜ ಪಾಟೀಲ, ಸುರೇಶ ಚಲವಾದಿ, ಮಂಜುನಾಥ ತಳವಾರ, ಮಂಜುನಾಥ ಕೊಟ್ನಿಕಲ್, ಪದ್ಮಿನಿ ಮುತ್ತಲದಿನ್ನಿ, ವಾಯ್.ಪಿ. ಅಡ್ನೂರ, ಬೂದಪ್ಪ ಹಳ್ಳಿ, ಎಂ.ಎಂ. ಹಿರೇಮಠ, ಅನಿಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಅಶೋಕ ಕರೂರ, ಸಂತೋಷ ಅಕ್ಕಿ, ಸುಧೀರ ಕಾಟೀಗರ, ದೇವಪ್ಪ ಗೊಟೂರ, ಸಂತೋಷ ಕಲ್ಯಾಣಿ, ಕೆ.ಪಿ. ಕೋಟಿಗೌಡ್ರ, ಮಂಜುನಾಥ ಶಾಂತಗೇರಿ, ಹನುಮಂತಪ್ಪ ದಿಂಡೆಣ್ಣವರ, ರವಿ ವಗ್ಗನವರ, ಶಿವನಂದ ಹರಿಜನ, ವಾಸು ಹುಯಿಲಗೋಳ, ವಿಜಯಲಕ್ಷ್ಮೀ ಮಾನ್ವಿ, ರೇಖಾ ಬಂಗಾರಶೆಟ್ಟರ, ಮೇಘಾ ಕೊಟ್ಟೂರ, ಸ್ವಾತಿ ಅಕ್ಕಿ, ವಿನೋದ ಹಂಸನೂರ ಮುಂತಾದವರು ಉಪಸ್ಥಿತರಿದ್ದರು.