ವಿಜಯಸಾಕ್ಷಿ ಸುದ್ದಿ, ಗದಗ: ಸೇವಾ ನಿವೃತ್ತಿ ಹೊಂದಿದ ಡಾ. ಪ್ರಕಾಶ ದೇಶಪಾಂಡೆ ಅವರು 40 ವರ್ಷ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ವಾಣಿಜ್ಯಶಾಸ್ತ್ರದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಪ್ರೋತ್ಸಾಹಿಸಿ ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಾಚಾರ್ಯ ಎಮ್.ಯು. ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಷಯದ ಸಹಪ್ರಾಧ್ಯಾಪಕ ಡಾ. ಪ್ರಕಾಶ ದೇಶಪಾಂಡೆ ಅವರ ಸೇವಾ ನಿವೃತ್ತಿಯ ನಿಮಿತ್ತ ಸನ್ಮಾನಿಸಿ ಮಾತನಾಡಿದರು.
ಡಾ. ಎಸ್.ಎಫ್. ಸಿದ್ನೆಕೊಪ್ಪ ಮಾತನಾಡಿ, ಡಾ. ಪ್ರಕಾಶ ದೇಶಪಾಂಡೆ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ನಿಷ್ಠೆಯಿಂದ ಸೇವೆ ಸಲ್ಲಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಪ್ರೊ. ಪ್ರಕಾಶ ಕರಿಗಾರ, ಗೆಜೆಟೆಡ್ ವ್ಯವಸ್ಥಾಪಕ ಎಫ್.ಎಸ್. ಕರಬುಡ್ಡಿ, ಪ್ರೊ. ಸತ್ತಾರ ಬಡೆಖಾನ ಮಾತನಾಡಿ, ದೇಶ ಕಟ್ಟುವ ಸೃಜನಶೀಲ ಸಮಾಜವನ್ನು ನಿರ್ಮಿಸುವ ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ಅರ್ಪಿಸಿ ಸೇವಾ ನಿವೃತ್ತರಾಗುತ್ತಿರುವ ಡಾ. ಪ್ರಕಾಶ ದೇಶಪಾಂಡೆ ಅವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಡಾ. ಪ್ರಕಾಶ ದೇಶಪಾಂಡೆ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ನನಗೆ ಸಿಕ್ಕ ಅವಕಾಶ ಒಂದು ಸುದೈವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಎಸ್.ಯು. ಸಜ್ಜನಶೆಟ್ಟರ, ಎಎಸ್ಎಸ್ ಪ್ರಾಚಾರ್ಯ ಗಿರಿರಾಜ, ಡೇವಿಡ್, ಗುರುಪಾದ ಸುರಪೂರ, ಡಾ. ಎಸ್.ಕೆ. ಪೂಜಾರ, ಮಹಾಲಕ್ಷ್ಮೀ ಹುಟಗಿ, ಪ್ರೊ. ರೂಪಾ ಶ್ರೀನಿವಾಸ, ಶ್ರೀಕಾಂತ ದೇಶಪಾಂಡೆ, ಪ್ರಿಯಾ ದೇಶಪಾಂಡೆ, ಶೈಲಶ್ರೀ ಜೋಶಿ, ಪಿ.ಸಿ. ಶಿವಪ್ಪನಮಠ, ಪ್ರೊ. ಡಿ.ಕೆ. ಕುಲಕರ್ಣಿ, ಪ್ರೊ. ಮಹಬೂಬ ಆರೀಫ ಸದರಸೋಪವಾಲೆ, ಕಸ್ತೂರಿ ಗವಸಿದ್ದಪ್ಪ, ಪ್ರೊ. ಸತೀಶ ಸರ್ವಿ, ಪ್ರೊ. ಕೃಷ್ಣಪ್ಪ ಬೆಂತೂರ, ಡಾ. ಸುಜಾತಾ ಬರದೂರ, ಪ್ರೊ. ಶ್ರೀದೇವಿ ದಾಸರ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ವಹಿದಾ ಕಿಲ್ಲೆದಾರ, ಬಸುರಾಜ ಡಾನಿ, ಲಕ್ಷ್ಮೀ ನಾಗರಾಳ, ಶ್ರೀದೇವಿ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು.