ವಿಜಯಸಾಕ್ಷಿ ಸುದ್ದಿ, ಗದಗ : ಗುರುವಾರ ನಿಧನರಾದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಮುಳುಗುಂದ ನಾಕಾ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಗೌರವ ಜಿಲ್ಲಾಧ್ಯಕ್ಷ ನಿಂಗನಗೌಡ ಎಸ್.ಮಾಲಿಪಾಟೀಲ, ಭಾರತದಲ್ಲಿ ಖಾಸಗೀಕರಣದ ಹೆಬ್ಬಾಗಿಲನ್ನು ತೆರೆದು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಿ ಭಾರತೀಯರ ಆರ್ಥಿಕ ಸ್ಥಿತಿಯನ್ನು ಕೆಳವರ್ಗದಿಂದ ಮಧ್ಯಮ, ಮೇಲ್ಮಧ್ಯಮ ವರ್ಗಕ್ಕೆ ಕೊಂಡೊಯ್ಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮನಮೋಹನ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮಾರುತಿ ಈಳಿಗೆರೆ, ವಿನಾಯಕ್ ಬದಿ, ಜಿಲ್ಲಾ ಕಾರ್ಯದರ್ಶಿ ಕುಮಾರ್ ರೇವಣ್ಣವರ್, ತಾಲೂಕ್ ಉಪಾಧ್ಯಕ್ಷ ದಾವಲ್ಸಾಬ್ ತಹಸೀಲ್ದಾರ್, ರವಿ ಮಲ್ನಾಡ್, ಗೋವಿಂದ ಬಿಂಕದಕಟ್ಟಿ, ಆನಂದ್ ವಾಲ್ಮೀಕಿ, ಗಂಗಾಧರ ಕಾಡಪ್ಪನವರ್, ತಿರುಮಲ ಬಿಂಕದಕಟ್ಟಿ, ಷಣ್ಮುಗ, ಮೈಲಾರಪ್ಪ ಮಲ್ಲಾಡದ ಮುಂತಾದವರಿದ್ದರು.