ವಿಜಯಸಾಕ್ಷಿ ಸುದ್ದಿ, ಗದಗ: ನಟರಂಗ ಸಾಂಸ್ಕೃತಿಕ ಕೇಂದ್ರ ಗದಗ, ತೋಂಟದಾರ್ಯ ಕಲಾ ರಂಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ಜಗದ್ಗುರು ಶ್ರೀ ತೋಂಟದಾರ್ಯ ಮಠದ ಆವರಣದಲ್ಲಿ `ಪುಣ್ಯಕೋಟಿ’ ರೂಪಕವನ್ನು ಹಮ್ಮಿಕೊಳ್ಳಲಾಗಿತ್ತು.
ಧಾರವಾಡ ರಂಗಾಯಣ ನಿರ್ದೇಶಕರಾದ ರಾಜು ತಾಳಿಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ನಾಟಕ ಕೌಶಲ್ಯಕ್ಕೆ ಇಂಬುಕೊಡುವ ನಿಟ್ಟಿನಲ್ಲಿ ನಟರಂಗ ಕಾರ್ಯಪ್ರವೃತ್ತವಾಗಿದೆ. ಮಕ್ಕಳ ಮನೋವಿಕಾಸಕ್ಕೆ ನಾಟಕ ಪೂರಕ ಮತ್ತು ಪೋಷಕವಾಗಿವೆ. ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಭಾವಶಾಲಿಯಾಗಿದೆ. ಇಂತಹ ರೂಪಕಗಳನ್ನು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ವೀಕ್ಷಿಸಬೇಕೆಂದು ಕಿವಿಮಾತು ಹೇಳಿದರು.
ಈ ಮುದ್ದು ಮಕ್ಕಳು ಇಂತಹ ರೂಪಕಗಳಲ್ಲಿ ಪಾಲ್ಗೊಂಡು ತಮ್ಮ ಅಭಿನಯವನ್ನು ಪ್ರಸ್ತುತಪಡಿಸಿರುವುದು ಶ್ಲಾಘನೀಯವಾಗಿದೆ. ಮಕ್ಕಳು ಮೊಬೈಲ್ ಗೀಳು ಬಿಟ್ಟು ನಾಟಕ, ರೂಪಕಗಳನ್ನು ನೋಡುವಂತೆ ಈ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಯೋಜನೆ ಮಾಡಬೇಕಿದೆ. ಗದಗ ಜಿಲ್ಲೆಯು ಸಾಂಸ್ಕೃತಿಕ ಕೇಂದ್ರವಾಗಿದ್ದು, ಪದ್ಮಭೂಷಣ ಲಿಂ ಡಾ. ಪುಟ್ಟರಾಜ ಕವಿಗವಾಯಿಗಳು, ಭಾರತ ರತ್ನ ಭೀಮಸೇನ ಜೋಶಿಯವರು ಗದಗ ಜಿಲ್ಲೆಯನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ. ಜಿ.ಬಿ. ಪಾಟೀಲ್, ವಿವೇಕಾನಂದಗೌಡ ಪಾಟೀಲ್, ಪ್ರೊ. ಕೆ.ಎಚ್. ಬೇಲೂರ, ಶ್ರೀನಿವಾಸ್ ಹುಯಿಲಗೋಳ, ಚನ್ನವೀರಶಾಸ್ತಿç ಖಡಣಿ, ವಿಜಯಕುಮಾರ ಹಿರೇಮಠ, ಪ್ರೊ. ಬಾಹುಬಲಿ ಜೈನರ, ಅಜಿತ್ ಘೋರ್ಪಡೆ, ರಂಗಾಯಣದ ಕೇಶವ್ ಬಡಿಗೇರ್, ಸೋಮಶೇಖರ್ ಚಿಕ್ಕಮಠ, ಪೂಜಾ ಸೋಮಶೇಖರ್ ಚಿಕ್ಕಮಠ, ಬಸವರಾಜ ಮುಖಂಡಮಠ, ನಾಗರಾಜ ಮಿಸಾಳ, ನಾಗರಾಜ ಬಡಿಗೇರ, ಅಕ್ಷತಾ ಹಿರೇಮಠ, ಜ್ಯೋತಿ ಅಲ್ಕುಂದಿ, ಮಹಾಂತೇಶ ಹೂಗಾರ, ಸಂತೋಷ ಜಾಲಿಯಾಳ, ಪುಣ್ಯಕೋಟಿ ನಾಟಕದ ನಿರ್ದೇಶಕ ಮಾಂತೇಶ್ ಗಜೇಂದ್ರಗಡ ಉಪಸ್ಥಿತರಿದ್ದರು.