ಕೆರೆಯ ಕುಡಿಯುವ ನೀರು ಭತ್ತದ ಗದ್ದೆಗೆ: ಅಧಿಕಾರಿಗಳ ದಿವ್ಯ ಮೌನ

0
Spread the love

ಬಳ್ಳಾರಿ;- ನಗರದಲ್ಲಿ ಕುಡಿಯುವ ನೀರಿಗೆ ಮಾತ್ರ ರಕ್ಷಣೆ ಇಲ್ಲದಂತಾಗಿದೆ. ಕುಡಿಯುವ ಕೆರೆ ನೀರು ಭತ್ತದ ಗದ್ದೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಈ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ. ಕುಡಿಯಲು ಸಂಗ್ರಹಿಸಿರುವ ನೀರನ್ನು ಕೆಲ ಸ್ಥಳೀಯರ ಪ್ರಭಾವದಿಂದ ಭತ್ತದ ಗದ್ದೆಗೆ,

Advertisement

ಬಳಕೆ ಮಾಡಲಾಗುತ್ತಿದೆ. ಪೈಪ್ ಹಾಕುವ ಮುಖಾಂತರ ಕೆರೆಯ ನೀರನ್ನು ಭತ್ತದ ಗದ್ದೆಗೆ ರವಾನೆ ಮಾಡಲಾಗಿದೆ. ಕೆರೆಯ ಸುತ್ತ ಸೂಕ್ತ ರಕ್ಷಣೆಯಿಲ್ಲ, ಸ್ಥಳೀಯ ಆಡಳಿತದ ಪ್ರಭಾವದಿಂದ ಸ್ಥಳೀಯರು ಹೆಸರು ಹೇಳುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗಮನ ಹರಿಸದೆ ಹೋದರೆ ಬೇಸಿಗೆಗೆ ಕುಡಿಯುವ ನೀರಿನ ಅಭಾವ ಗ್ಯಾರಂಟಿ ಎಂದು ಸ್ಥಳಿಯರು ಆರೋಪಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here