ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ರಾಜ್ಯ ಮತ್ತು ಜಿಲ್ಲಾ ಘಟಕಗಳ ಆದೇಶದ ಅನ್ವಯ ರವಿವಾರ ತಾಲೂಕಾ ಸಾಹಿತ್ಯ ಭವನದಲ್ಲಿ ಜರುಗಿತು.
ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಶಿಕ್ಷಕಿ ವಿರೂಪಮ್ಮ ಹಿರೇಮಠ, ಉಪಾಧ್ಯಕ್ಷರಾಗಿ ಪತ್ರಕರ್ತ ಸೋಮು ಲದ್ದಿಮಠ, ಬಿ.ಎಸ್. ರಡ್ಡೆರ, ವೀರಯ್ಯ ನೆಲ್ಲೂರಮಠ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಬಿ. ಮೇಗಲಮನಿ, ಸಹ ಕಾರ್ಯದರ್ಶಿಯಾಗಿ ಪತ್ರಕರ್ತ ಮೆಹಬೂಬ ಮೋತೆಖಾನ್, ಸಂಘಟನಾ ಕಾರ್ಯದರ್ಶಿಯಾಗಿ ಯಲ್ಲಪ್ಪ ಕೊಪ್ಪದ, ಕಾರ್ಯದರ್ಶಿಯಾಗಿ ಶಿಂಧು ದೊಡ್ಡಮನಿ, ಸದಸ್ಯರಾಗಿ ಶರಣಪ್ಪ ಹೆಬ್ಬಳ್ಳಿ, ಮಹೇಶ ಗೌಡರ, ಎಂ.ಎಚ್. ಮಡಿವಾಳರ, ಎಚ್.ಸಿ. ರಂಗನಗೌಡ್ರ, ಬಿ.ಜಿ. ಕೊವಳ್ಳಿ, ಬಿ.ಐ. ಪಿಡ್ಡನಗೌಡ್ರ, ಎನ್.ವಿ. ನೀರಲೊಟಿ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ವಾಯ್.ಡಿ. ಗಾಣಿಗೇರ ಹಾಗೂ ತಾಲೂಕಾ ನೌಕರರ ಸಂಘದ ಅದ್ಯಕ್ಷ ಎಸ್.ಜಿ. ದಾನಪ್ಪಗೌಡ್ರರನ್ನು ಪೋಷಕರಾಗಿ ಸರ್ವಾನುಮತದಿಂದ ಘೋಷಿಸಲಾಯಿತು.