ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗದಗ ಜಿಲ್ಲಾ ಯುವ ಘಟಕದ ಗದಗ ತಾಲೂಕು ಗ್ರಾಮೀಣ ಯುವ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಗುಡದೂರ, ಪ್ರಧಾನ ಕಾರ್ಯದರ್ಶಿಗಳಾಗಿ ಸಂತೋಷ ಬಳ್ಳಾರಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್ ಗದಗಿನ, ಉಪಾಧ್ಯಕ್ಷರಾಗಿ ಶಿವಾನಂದ ಇನಾಮತಿ, ಮಂಜುನಾಥ್ ಕರುಗಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Advertisement
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಪ್ರಮುಖರಾದ ನೀಲಕಂಠಪ್ಪ ಮಲಕಾಜಪ್ಪ ಕೊಟಗಿ, ಪಂಚಮಸಾಲಿ ಸಮಾಜದ ಶಿರಹಟ್ಟಿ ಹಾಗೂ ಲಕ್ಮೇಶ್ವರ ತಾಲೂಕಿನ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ಬಸವರಾಜ್ ತುಳಿ ಅವರನ್ನು ಸನ್ಮಾನಿಸಲಾಯಿತು.
ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮಲಗೌಡರ್, ಸಮಾಜದ ಹಿರಿಯರಾದ ಬಿ.ಎಸ್. ಚಿಂಚಳ್ಳಿ, ಸಿ.ಬಿ. ಪಲ್ಲೇದ್, ಎಸ್.ವಿ. ಪಲ್ಲೇದ್, ಭದ್ರೇಶ ಕುಸಲಾಪುರ, ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂತೋಷ ಅಕ್ಕಿ ಉಪಸ್ಥಿತರಿದ್ದರು.