ಕರೆಂಟ್ ಶಾಕ್: ಹೈಟೆನ್ಷನ್ ವೈಯರ್ ತಗುಲಿ ಬಾಲಕ ಗಂಭೀರ.. ಬೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ!

0
Spread the love

ಬೆಂಗಳೂರು:- ಮನೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವೈಯರ್ ನಿಂದ ದಿಢೀರ್ ಬೆಂಕಿ ಆವರಿಸಿ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪನಗರದಲ್ಲಿ ನಡೆದಿದೆ..

Advertisement

ಹೌದು ಮೂರು ಅಂತಸ್ತಿನ ಮನೆಯ ಮೇಲಿಂದ ಬಾಲಕನೋರ್ವ ಪೊರಕೆಯನ್ನು ಕೆಳಗೆ ಎಸೆಯುವಾಗ ಪೊರಕೆಯು ವೈಯರ್ ತಗುಲಿದ ಪರಿಣಾಮ ದಿಢೀರ್ ಬೆಂಕಿ ಹೊತ್ತಿದೆ. ಪರಿಣಾಮ ಬಾಲಕನ ದೇಹವು ತೊಂಬತ್ತರಷ್ಟು ಸುಟ್ಟು ಹೋಗಿದೆ. ಅಷ್ಟೇ ಅಲ್ಲದೆ ಮನೆಗೆ ಕರೆಂಟ್ ಶಾಕ್ ತಗಲಿದ್ದು, ಮನೆಯಲ್ಲಿದ್ದ ಟಿವಿ, ವಾಷಿಂಗ್ ಮಿಷನ್ ಸುಟ್ಟು ಭಸ್ಮವಾಗಿವೆ.

ಇನ್ನೂ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೆಲ್ಲಾ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..


Spread the love

LEAVE A REPLY

Please enter your comment!
Please enter your name here