ಜೀಪ್ ರೇಸ್‍ ವೇಳೆ ಆನೆ ಎಂಟ್ರಿ: ಕೇರಳ ವ್ಯಕ್ತಿ ಅಟ್ಟಾಡಿಸಿದ ಒಂಟಿ ಸಲಗ!

0
Spread the love

ಹಾಸನ:- ಸಕಲೇಶಪುರದ ಬೆಳ್ಳೂರು ಗ್ರಾಮದ ಹೊಳೆಸಾಲು ಅರಣ್ಯ ಪ್ರದೇಶದಲ್ಲಿ ಜೀಪ್ ರೇಸ್‍ಗೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯನ್ನು ದೈತ್ಯ ಒಂಟಿ ಸಲಗವೊಂದು ಅಟ್ಟಾಡಿಸಿರುವ ಘಟನೆ ಜರುಗಿದೆ.

Advertisement

ಹೌದು, ಆನೆಗಳು ಓಡಾಡುವ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಜೀಪ್‍ಗಳಿಂದ ರೇಸ್ ಆಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಸಲಗ ದಿಢೀರ್ ಎಂಟ್ರಿ ಕೊಟ್ಟಿದೆ. ಅಲ್ಲೇ ಇದ್ದ ವ್ಯಕ್ತಿಯನ್ನು ಆನೆ ಅಟ್ಟಾಡಿಸಿದೆ. ಅಲ್ಲದೇ ಸೊಂಡಲಿನಿಂದ ಎತ್ತಿ ಎಸೆಯಲು ಯತ್ನಿಸಿದೆ. ಈ ವೇಳೆ ಜೋರಾಗಿ ಕೂಗಾಡುತ್ತಾ ಜೀಪ್‍ಗಳನ್ನು ಆನೆಯ ಹತ್ತಿರ ಕೊಂಡೊಯ್ದಿದ್ದು, ಆನೆ ಅಲ್ಲಿಂದ ತೆರಳಿದೆ.

ಕಾಡಾನೆ ದಾಳಿಯಿಂದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆನೆ ದಾಳಿಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡಗಿಸುವಂತಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here