ಹಾಸನ:- ಸಕಲೇಶಪುರದ ಬೆಳ್ಳೂರು ಗ್ರಾಮದ ಹೊಳೆಸಾಲು ಅರಣ್ಯ ಪ್ರದೇಶದಲ್ಲಿ ಜೀಪ್ ರೇಸ್ಗೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯನ್ನು ದೈತ್ಯ ಒಂಟಿ ಸಲಗವೊಂದು ಅಟ್ಟಾಡಿಸಿರುವ ಘಟನೆ ಜರುಗಿದೆ.
Advertisement
ಹೌದು, ಆನೆಗಳು ಓಡಾಡುವ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಜೀಪ್ಗಳಿಂದ ರೇಸ್ ಆಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಸಲಗ ದಿಢೀರ್ ಎಂಟ್ರಿ ಕೊಟ್ಟಿದೆ. ಅಲ್ಲೇ ಇದ್ದ ವ್ಯಕ್ತಿಯನ್ನು ಆನೆ ಅಟ್ಟಾಡಿಸಿದೆ. ಅಲ್ಲದೇ ಸೊಂಡಲಿನಿಂದ ಎತ್ತಿ ಎಸೆಯಲು ಯತ್ನಿಸಿದೆ. ಈ ವೇಳೆ ಜೋರಾಗಿ ಕೂಗಾಡುತ್ತಾ ಜೀಪ್ಗಳನ್ನು ಆನೆಯ ಹತ್ತಿರ ಕೊಂಡೊಯ್ದಿದ್ದು, ಆನೆ ಅಲ್ಲಿಂದ ತೆರಳಿದೆ.
ಕಾಡಾನೆ ದಾಳಿಯಿಂದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆನೆ ದಾಳಿಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡಗಿಸುವಂತಿದೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.