ವಿಜಯಸಾಕ್ಷಿ ಸುದ್ದಿ, ಡಂಬಳ: ಕಲಿಕೆ ನಿರಂತರ ಪ್ರಕ್ರಿಯಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಧ್ಯಯನದ ಜೊತೆಯಲ್ಲಿ ಕೌಶಲ್ಯಯುತ ತರಬೇತಿ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಎಸ್.ಎಂ. ಶಿವಾಚಾರ್ಯ ಹೇಳಿದರು.
ಅವರು ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಜಗದ್ಗುರು ತೋಂಟದಾರ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಮುಗಿಸಿದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು ವರ್ಷದ ತರಬೇತಿ ಜೊತೆಯಲ್ಲಿ ಸಂಬಳ ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಇದರ ಸದುಪಯೋಗವನ್ನು ಪಡೆದುಕೊಳ್ಳುವುದರ ಜೊತೆಯಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಆರ್.ಜಿ. ಕೊರ್ಲಹಳ್ಳಿ ಮಾತನಾಡಿ, ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲಾ ಸಾಕಷ್ಟು ಕಂಪನಿಗಳು ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿವೆ. ತಂದೆ, ತಾಯಿ, ಗುರುಗಳು ಹೇಳುವ ಮೌಲ್ಯಯುತ ಮಾತುಗಳನ್ನು ಪಾಲಿಸುವುದರಿಂದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಂ. ಶಿವಾಚಾರ್ಯ, ಜಿ. ಮಹೇಶಗೌಡ, ಆರ್.ಜಿ. ಕೊರ್ಲಹಳ್ಳಿ, ಎಸ್.ಎಸ್. ಕುಂಬಾರ, ಬಿ.ಎಂ. ಪಾಟೀಲ ಹಾಗೂ ವಿ.ಡಿ. ಸಿದ್ದನಗೌಡರ ಇದ್ದರು.