ತುರ್ತು ಪರಿಸ್ಥಿತಿ ಇತಿಹಾಸ ಪುಟ ಸೇರಿದೆ ಆದ್ರೆ ಬಿಜೆಪಿಯವರು ಜೀವಂತ ಇಡಲು ನೋಡುತ್ತಿದ್ದಾರೆ: ಡಾ.ಜಿ.ಪರಮೇಶ್ವರ್

0
Spread the love

ಬೆಂಗಳೂರು: ತುರ್ತು ಪರಿಸ್ಥಿತಿ ಇತಿಹಾಸ ಪುಟ ಸೇರಿದೆ ಆದ್ರೆ ಬಿಜೆಪಿಯವರು ಜೀವಂತ ಇಡಲು ನೋಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬಿಜೆಪಿ ತುರ್ತುಪರಿಸ್ಥಿತಿ ಕರಾಳ ದಿನಾಚರಣೆ ವಿಚಾರಕ್ಕೆ ನಗರದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿ 50 ವರ್ಷ ಆಗಿ ಹೋಗಿದೆ. ತುರ್ತು ಪರಿಸ್ಥಿತಿ ಇತಿಹಾಸ ಪುಟ ಸೇರಿದೆ. ಬಿಜೆಪಿಯವರು ಜೀವಂತ ಇಡಲು ನೋಡುತ್ತಿದ್ದಾರೆ.

Advertisement

50 ವರ್ಷ ಆದರೂ ಆಚರಣೆ ಮಾಡ್ತಿದ್ದಾರೆ. ಇದರ ಹಿಂದಿನ ರಾಜಕೀಯ ದುರುದ್ದೇಶ ಏನು?.‌ ನಾವು ಮುಂದಕ್ಕೆಹೋಗಬೇಕು, ಹಿಂದೆ ಅಲ್ಲ. ಮೋದಿಯವರೇ ಭವಿಷ್ಯದತ್ತ ಹೋಗೋಣ ಅಂತಾರೆ. ಯಾಕೆ ಇವರು ಹಿಂದಕ್ಕೆ ಹೋಗ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಸಂಪಿಗೆಹಳ್ಳಿ ಠಾಣೆ ಮುಂದೆ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ,ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ತಾರೆ. ಇದಕ್ಕೆ ಸಂಬಂಧಿಸಿದ ಕಾನೂನಿದೆ. ಅದರಂತೆ ಪೊಲೀಸರು ಕ್ರಮಜರುಗಿಸ್ತಾರೆ. ಇಂತಹ ಘಟನೆಗೆ ಸರ್ಕಾರ ಅವಕಾಶ ಕೊಡಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here