ಪರಿಸರ ಸುಸ್ಥಿರತೆಗೆ ಒತ್ತು ನೀಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದರ ಮೂಲಕ ಸಮುದಾಯ ಆರೋಗ್ಯ ಮತ್ತು ಪರಿಸರ ಸುಸ್ಥಿರತೆಗೆ ಒತ್ತು ನೀಡಲು ಈ ಕಾರ್ಯಕ್ರಮ ಮುಂದಾಗಿದೆ ಎಂದು ಕಾಶಿ ಪೀಠದ ಜ. ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಹೇಳಿದರು.

Advertisement

ಅವರು ನಗರದ ಟಾಟಾ ಮೋಟಾರ್ಸ್ ಮಾಣಿಕಬಾಗ್ ಇವರ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು 111 ಸಸಿಗಳ ಉಚಿತ ವಿತರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಸಿಗಳ ಉಚಿತ ವಿತರಣೆ ಮಾಡುವುದರ ಜೊತೆಗೆ ಸ್ವಚ್ಛ ಮತ್ತು ಹಸಿರು ಗದಗದತ್ತ ಒಂದು ಹೆಜ್ಜೆಯಿಟ್ಟು, ಹಸಿರು ಹೊದಿಕೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕೈಗಾರಿಕೋದ್ಯಮಿ, ಯುವ ಮುಖಂಡ ಭರತ್ ಬೊಮ್ಮಾಯಿ ಹಾಗೂ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಡಾ.ಕಾರ್ತಿಕ ಶಿವಪುರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಡಾ. ರಾಜಶೇಖರ ಮ್ಯಾಗೇರಿ, ಮಾಣಿಕಬಾಗ್ ಆಟೋಮೊಬೈಲ್ಸ್ ಪ್ರೈ.ಲಿ ಸಂಸ್ಥೆಯ ಕಾರ್ತಿಕ ಶಿಗ್ಲಿಮಠ, ಸೇಲ್ಸ್ ಮುಖ್ಯಸ್ಥ ಈಶ್ವರ ಕರಮುಡಿ, ರಾಜಣ್ಣ ಶಿಗ್ಲಿಮಠ, ಲಿಂಗರಾಜ ಪಾಟೀಲ, ವಿಜಯಕುಮಾರ ಬಾಳಿಹಳ್ಳಿಮಠ, ಅಶೋಕ ಸಂಕಣ್ಣವರ, ರಮೇಶ ಹತ್ತಿಕಾಳ, ಚಂದ್ರು ಬಾಳಿಹಳ್ಳಿಮಠ, ಶಿವಾನಂದ ಹಿರೇಮಠ, ಉಮೇಶ ಹುಬ್ಬಳ್ಳಿ, ರಾಜು ಕುರಡಗಿ, ಪ್ರಶಾಂತ ನಾಯ್ಕರ, ಶಿವು ಹಿರೇಮನಿ ಪಾಟೀಲ, ರಮೇಶ ಸಜ್ಜಗಾರ, ದೇವೇಂದ್ರಪ್ಪ ಹೂಗಾರ, ಸುರೇಶ ಮರಳಪ್ಪನವರ, ಸಂತೋಷ ಅಕ್ಕಿ, ಸಂಗಮೇಶ ಅಂಗಡಿ, ಬಸವರಾಜ ನರೇಗಲ್, ವಿನಾಯಕ ಹೊರಕೇರಿ, ನವೀನ ಕುರ್ತಕೋಟಿ, ಅವಿನಾಶ್ ಹೊನ್ನಗುಡಿ, ಶಶಿರೇಖಾ ಶಿಗ್ಲಿಮಠ, ನಾಗರತ್ನ ಹುಬ್ಳಿಮಠ, ಜಯಶ್ರೀ ಹುಬ್ಬಳ್ಳಿ, ಶಾರದ ಹಿರೇಮಠ, ವಿಜಯಲಕ್ಷ್ಮೀ ಮಾನ್ವಿ, ಲಲಿತಾ ಬಾಳಿಹಳ್ಳಿಮಠ, ನಿರ್ಮಲಾ ಹುಬ್ಳಿಮಠ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here