HomeGadag Newsಆಧುನಿಕ ಬದುಕಿನಿಂದ ಪರಿಸರ ನಾಶ

ಆಧುನಿಕ ಬದುಕಿನಿಂದ ಪರಿಸರ ನಾಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಸುತ್ತಮುತ್ತಲಿನ ಭಾಗಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ: ಶಾಲೆಯ ವಿಜ್ಞಾನ ಶಿಕ್ಷಕ ಕೆ.ಡಿ. ದಿನಾಚರಣೆಯನ್ನುದ್ದೇಶಿಸಿ ಅರವಟಗಿಮಠ ಮಾತನಾಡಿ, ಪರಿಸರ ದಿನ ಪ್ರತಿ ವರ್ಷ ಜೂನ್ 5ಕ್ಕೆ ಮಾತ್ರ ಸೀಮಿತವಾಗಬಾರದು. ಸಮೀಪದ ಕಪ್ಪತಗುಡ್ಡ ಇಡೀ ಏಷ್ಯಾ ಖಂಡದಲ್ಲಿ ಶುದ್ಧ ವಾಯು ನೀಡಿ ಎಲ್ಲ ಸಕಲ ಜೀವಿಗಳಿಗೆ ಆಶ್ರಯ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ ಎಂದರು.

ಪ್ರಾಚಾರ್ಯ ಡಿ.ಬಿ. ಅಡವಿ ಮಾತನಾಡಿದರು. ನಿಲಯ ಪಾಲಕ ಅಶೋಕ ತಂಬಾಕು, ಎಸ್.ಎ. ಪಟ್ಟಣಶೆಟ್ಟರ, ಆರ್.ಎ. ನಮಾಜಿ, ಎಂ.ವಾಯ್. ಬೆಟದೂರ, ಎ.ಎಸ್. ತಡಹಾಳ, ಎಸ್.ಸಿ. ವಸ್ತ್ರದ, ಸಿದ್ದಲಿಂಗೇಶ ಕಣವಿ, ಎ.ಡಿ. ಯತ್ನಟ್ಟಿ, ಎಂ.ಪಿ. ಶಿವಶರಣರ, ಪ್ರವೀಣ ಕಂಬ್ಳಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಎಸ್‌ಎವಿ ಬಾಲಿಕೆಯರ ಪ್ರೌಢಶಾಲೆಯಲ್ಲಿ: ಪಟ್ಟಣದ ಎಸ್‌ಎವಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರಿಸರದ ಸಂರಕ್ಷಣೆ ಕುರಿತಾದ ಸ್ರಜನಶೀಲ ಕಲಾ ಚಿತ್ರಗಳನ್ನು ರಚಿಸಿದರು. ಹಲವು ವಿದ್ಯಾರ್ಥಿನಿಯರು ಪರಿಸರ ಸಂರಕ್ಷಣೆ ಕುರಿತಾದ ಪ್ರಬಂಧಗಳನ್ನು ಮಂಡಿಸಿದರು. ಮುಖ್ಯೋಪಾಧ್ಯಾಯರಾದ ಎಸ್.ಎನ್. ಹೂಲಗೇರಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ವಿಶೇಷವಾಗಿ ಮಕ್ಕಳು ಈ ಕುರಿತಾಗಿ ಅರಿವು ಹೊಂದುವುದರ ಜೊತೆಗೆ ಜನಸಾಮಾನ್ಯರಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ಬಿ.ಡಿ. ಯರಗೊಪ್ಪ ನಿರೂಪಿಸಿದರು. ಎಸ್.ಶಿವಮೂರ್ತಿ ಗುರುಗಳು ವಂದಿಸಿದರು. ಎಸ್.ಎಫ್. ಧರ್ಮಾಯತ ಹಾಗೂ ಆರ್.ಎಮ್. ಗುಳಬಾಳ ಗುರುಮಾತೆಯರು ಉಪಸ್ಥಿತರಿದ್ದರು.

ಕೆಜಿಎಂಎಸ್ ಶಾಲೆಯಲ್ಲಿ

ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ನಮ್ಮ ಸುತ್ತಲಿನ ಪರಿಸರವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರ ಜೊತೆಗೆ ಎಲ್ಲ ಕಡೆಗಳಲ್ಲಿಯೂ ಗಿಡಗಳನ್ನು ನೆಡುವ ಜಾಗೃತಿ ಮೂಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!