ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಕ್ಕನ ಬಳಗದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಸಂಭ್ರಮದಿಂದ ದೇವಿಯ ಘಟಸ್ಥಾಪನಾ ಕಾರ್ಯಕ್ರಮ ನೆರವೇರಿಸಲಾಯಿತು. ಪೂಜಾ ಸಮಾರಂಭದ ಭಕ್ತಿ ಸೇವೆಯನ್ನು ರೇಣುಕಾ ಲಿಂಗರಾಜ ಅಮಾತ್ಯ ವಹಿಸಿಕೊಂಡಿದ್ದರು.
ಅಧ್ಯಕ್ಷರಾದ ಜಯಶ್ರೀ ಉಮೇಶ ಹುಬ್ಬಳ್ಳಿ, ಕಾರ್ಯದರ್ಶಿಗಳಾದ ಜಯಶ್ರೀ ತಾತನಗೌಡ ಪಾಟೀಲ, ಕೋಶಾಧ್ಯಕ್ಷರಾದ ಶಿವಲೀಲಾ ಹಿರೇಮಠ, ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ ಅವರು ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಹಿರಿಯ ಟ್ರಸ್ಟಿಗಳಾದ ನಾಗರತ್ನಾ ಹುಬ್ಬಳ್ಳಿಮಠ, ಅನ್ನಪೂರ್ಣ ಮಾಳೆಕೊಪ್ಪಮಠ, ಲಲಿತಾ ಬಾಳಿಹಳ್ಳಿಮಠ, ಶಾರದಾ ಹಿರೇಮಠ, ಮೀನಾಕ್ಷಿ ಸಜ್ಜನರ, ರೇಖಾ ಶಿಗ್ಲಿಮಠ, ಉಷಾ ಧಡೂತಿ, ಶಿವಲೀಲಾ ಕುರಡಗಿ, ಸುವರ್ಣ ವಸ್ತ್ರದ, ಸುವರ್ಣ ಹೊಸಂಗಡಿ, ಶಾರದಾ ಬೊಮ್ಮಸಾಗರ, ರಾಜೇಶ್ವರಿ ಶೆಟ್ಟರ, ಪಾರ್ವತಿ ಶಾಬಾದಿಮಠ, ಶಿವಲೀಲಾ ಅಕ್ಕಿ, ಶೈಲಜಾ ನಾಲ್ವಾಡ, ವೀಣಾ ಮಾನ್ವಿ, ನಾಗರತ್ನ ಮಾರನಬಸರಿ, ಪ್ರಭಾವತಿ ಯಳಮಲಿ, ಗೀತಾ ಬಸರಿಗಿಡದ, ಮಂಗಳಾ ನಾಲತ್ವಾಡಮಠ, ಲಲಿತಾ ಮುತ್ತಿನಪೆಂಡಿಮಠ, ಉಮಾ ಲಕ್ಷ್ಮೀಶ್ವರಮಠ, ಜಯಶ್ರೀ ಬಾಳಿಹಳ್ಳಿಮಠ, ವಿಜಯಲಕ್ಷ್ಮೀ ಮಾನ್ವಿ, ಅನುಪಮಾ ಜೋಳದ, ಮುದಗಣ್ಣವರ, ವಿಜಯಲಕ್ಷ್ಮೀ ಚಿತ್ತರಗಿ, ಉಮಾದೇವಿ ಚಿತ್ತರಗಿ ಮುಂತಾದವರಿದ್ದರು.