HomeGadag Newsಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕು: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕು: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಶ್ರವಣವು ಒಂದು ಉತ್ತಮ ಸಾಧನವಾಗಿದ್ದು, ಇದರಿಂದ ಮನುಷ್ಯನಿಗೆ ವಿಶೇಷ ಶಕ್ತಿ ದೊರಕುತ್ತದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಹಾನಗಲ್ಲ ಗುರುಕುಮಾರೇಶ್ವರ ಪುರಾಣದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ತನ್ನ ಆಯುಷ್ಯವನ್ನು ಸಮರ್ಪಕವಾಗಿ ಕಳೆಯಬೇಕು. ಯಾವಾಗಲೂ ಸದಾಚಾರ ಸಂಪನ್ನನಾಗಿ ತನ್ನ ಆಯುಷ್ಯ ಕಳೆಯಲು ಪ್ರಯತ್ನಿಸಬೇಕು. ಮನುಷ್ಯ ತನ್ನ ನಡೆ-ನುಡಿಗಳಿಂದ, ಆಚಾರ-ವಿಚಾರಗಳಿಂದ, ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಗುಣದಿಂದ ಆತ ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಆದ್ದರಿಂದ ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕೆಂದು ಶ್ರೀಗಳು ತಿಳಿಸಿದರು.

ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ, ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಸಮಾಜಕ್ಕೆ ಅಪಾರವಾದ ಕಾಣಿಕೆಯನ್ನು ನೀಡಿದ್ದಾರೆ. ಆಚಾರಕ್ಕೆ ಪರಿಭಾಷೆಯನ್ನು ಬೆರದವರು ಹಾನಗಲ್ಲ ಗುರು ಕುಮಾರೇಶ್ವರರು. ಯಾವನಲ್ಲಿ ದಾನ, ಜ್ಞಾನ ಮತ್ತು ಸೇವೆಯ ಗುಣಗಳಿರುತ್ತವೆಯೋ ಆತ ಈ ಸಮಾದಲ್ಲಿ ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ. ಎಲ್ಲರಲ್ಲಿಯೂ ಈ ಮೂರೂ ಗುಣಗಳಿರಲು ಸಾಧ್ಯವಿಲ್ಲ. ಇವು ಒಂದೊಂದು ರತ್ನಗಳಾಗಿದ್ದು, ಇದರಲ್ಲಿ ಯಾವುದಾದರೊಂದು ಇದ್ದರೂ ಅವನು ಸರ್ವಮಾನ್ಯನಾಗುತ್ತಾನೆ ಎಂದರು.

ಹಾನಗಲ್ಲ ಕುಮಾರ ಶಿವಯೋಗಿಗಳು ವೀರ ವೈರಾಗ್ಯ ಚಕ್ರವರ್ತಿಗಳು. ಅವರಲ್ಲಿ ಸನ್ಯಾಸತ್ವವು ಅತ್ಯಂತ ಉನ್ನತ ಮಟ್ಟದಲ್ಲಿತ್ತು. ಸ್ವತಃ ತಾಯಿಯೇ ತಮ್ಮನ್ನು ಭೇಟಿಯಾಗಲು ಬಂದಾಗಲೂ ಸಹ ಅವರು ಅವರನ್ನು ಭೇಟಿಯಾಗದೆ ಬೆನ್ನು ತಿರುಗಿಸಿ ಹೋದ ಮಹಾ ಮಹಿಮರು. ಸಾರ್ವಜನಿಕ ಜೀವನದ ಹಣವನ್ನು ಎಂದಿಗೂ ಸ್ವಂತಕ್ಕೆ ಬಳಸದ ಅವರು, ಸಮಾಜದ ಉದ್ಧಾರಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಶ್ರೇಷ್ಠ ಮಹಾತ್ಮರು ಎಂದರು.

ಸಭೆಯನ್ನುದ್ದೇಶಿಸಿ ವರ್ತಕ ಮುತ್ತಣ್ಣ ಪಲ್ಲೇದ ಮಾತನಾಡಿದರು. ವೇದಿಕೆಯ ಮೇಲೆ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಡಾ. ಆರ್.ಕೆ. ಗಚ್ಚಿನಮಠ ಉಪಸ್ಥಿತರಿದ್ದರು. ಶಿವಯೋಗಿ ಜಕ್ಕಲಿ ನಿರೂಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!