ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೇವಿ ಪುರಾಣ ಆಲಿಸುವುದರಿಂದ ದುಷ್ಟಶಕ್ತಿಗಳನ್ನು ನಿಗ್ರಹಿಸಲು ಸಹಕಾರಿ ಎಂದು ಪರ್ವಾತಿ ಕಳ್ಳಿಮಠ ಹೇಳಿದರು.
Advertisement
ಅವರು ಪಟ್ಟಣದ ರೇಣುಕಾ ಯಲ್ಲಮ್ಮಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜರುಗಿದ ದೇವಿ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿರುವ ದುಷ್ಟಶಕ್ತಿಗಳನ್ನು ನಿಗ್ರಹಿಸಲು ದೇವಿ ಪುರಾಣ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ದೇವಿ ಪುರಾಣ ಆಲಿಸಬೇಕು ಎಂದರು.
ಕೆ.ಎಂ. ಕಳ್ಳಿಮಠ, ಅಶೋಕ ಸೋನಗೋಜಿ, ಹರ್ಷಲತಾ ದೇಶಪಾಂಡೆ, ಶಾಂತಾ, ಚಂದ್ರಶೇಖರ ಹುಣಶಿಕಟ್ಟಿ, ಮಂಜುನಾಥ ಮಟ್ಟಿ, ದಶರಥ ಕೋಟೆಗೌಡರ, ನಿರ್ಮಲಾ ಅರಮನಿ, ಅಕ್ಕಮ್ಮಾ ನೀಲಗುಂದ, ಶೋಭಾ ಪಾಟೀಲ, ವೈಜಯಂತಿಮಾಲಾ ವಂಟಕರ, ನಾಗವೇಣಿ ನಾಯರ್, ಪ್ರಕಾಶ ಮದ್ದಿನ ಇದ್ದರು.