ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ವೀರಮಾತೆ ಕಿತ್ತೂರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳದಡಿ ಮಲ್ಲಮ್ಮ ಜನಿಸಿರುವ ಜಿಲ್ಲೆ ಬೆಳಗಾವಿಯಲ್ಲಿ ಪದೇಪದೇ ಕನ್ನಡಿಗರ ಮೇಲೆ ದಬ್ಬ್ಬಾಳಿಕೆಯನ್ನು ಮಾಡುತ್ತಿರುವ ಕನ್ನಡ ವಿರೋಧಿ ಮರಾಠಿಗರು ಮತ್ತು ಎಂಇಎಸ್ ಪುಂಡರನ್ನು ಈ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಅಂತಹ ಕನ್ನಡ ವಿರೋಧಿಗಳನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಎಸ್.ಮಾಲಿಪಾಟೀಲ್ ಆಗ್ರಹಿಸಿದ್ದಾರೆ.
Advertisement