ಬೆಂಗಳೂರು:- ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ ಕೊಡುವ ವಿಚಾರದಲ್ಲಿ ಲೋಪವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಂಕನೂರು ಮಧು ಬಂಗಾರಪ್ಪನವರಿಗೆ ಪ್ರಶ್ನೆ ಕೇಳಿದರು. ಪ್ರೌಢಶಾಲಾ ಶಿಕ್ಷಕರಿಗೆ ಪಿಯುಸಿ ಉಪನ್ಯಾಸಕರಾಗಿ ಪದೋನ್ನತಿ ಕೊಟ್ಟಿಲ್ಲ. 12 ವರ್ಷಗಳಿಂದ ಪದೋನ್ನತಿ ಕೊಟ್ಟಿಲ್ಲ. 12 ವರ್ಷ ಯಾಕೆ ಕಾಯುತ್ತಿದ್ದೀರಾ? 12 ವರ್ಷಗಳಲ್ಲಿ ಎಷ್ಟು ಜನ ಶಿಕ್ಷಕರು ಪದೋನ್ನತಿ ಸಿಗದೇ ನಿವೃತ್ತರಾಗಿದ್ದಾರೆ. ಪದೋನ್ನತಿ ನೀಡಲು ಸಿನಿಯರ್ ಪಟ್ಟಿ ರೆಡಿ ಆಗಿಲ್ಲ ಎನ್ನುತ್ತಾರೆ. ಇದು ಸರಿಯಲ್ಲ. ಕೂಡಲೇ ಪದೋನ್ನತಿ ಕೊಡಿ ಎಂದು ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಎರಡೂವರೆ ತಿಂಗಳ ಒಳಗೆ ಪ್ರೌಢಶಾಲಾ ಶಿಕ್ಷಕರಿಗೆ ಉಪನ್ಯಾಸಕರಾಗಿ ಪದೋನ್ನತಿ ನೀಡುವ ಕೆಲಸ ಮಾಡುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ ಕೊಡುವ ವಿಚಾರದಲ್ಲಿ ಲೋಪ ಆಗಿದೆ. ಎರಡೂವರೇ ತಿಂಗಳಲ್ಲಿ ಸಮಸ್ಯೆ ಪರಿಹಾರ ಆಗುತ್ತದೆ. ಆದಷ್ಟು ಬೇಗ ಮಾಡುತ್ತೇನೆ ಎಂದರು. ಇದಕ್ಕೆ ಯಾಕೆ ಎರಡೂವರೆ ತಿಂಗಳು ಬೇಕು, ಬೇಗ ಮಾಡಿ ಎಂದು ಸಭಾಪತಿ ತಿಳಿಸಿದರು. ಫೆಬ್ರವರಿ 15ರ ಒಳಗೆ ಪದೋನ್ನತಿ ನೀಡುವ ಪ್ರಕ್ರಿಯೆ ಮುಗಿಸುವಂತೆ ಸಚಿವರಿಗೆ ಸಭಾಪತಿ ಹೊರಟ್ಟಿ ಸೂಚನೆ ನೀಡಿದರು.