HomeLife Styleಕೆಲಸ ಮಾಡುತ್ತಲೇ ನಿದ್ರೆ ಬರುತ್ತಾ? ಹಾಗಾದ್ರೆ ಮಧ್ಯಾಹ್ನ ಹೊತ್ತು ಇವುಗಳನ್ನು ತಿನ್ನಬೇಡಿ!

ಕೆಲಸ ಮಾಡುತ್ತಲೇ ನಿದ್ರೆ ಬರುತ್ತಾ? ಹಾಗಾದ್ರೆ ಮಧ್ಯಾಹ್ನ ಹೊತ್ತು ಇವುಗಳನ್ನು ತಿನ್ನಬೇಡಿ!

For Dai;y Updates Join Our whatsapp Group

Spread the love

ಬಹುತೇಕ ಮಂದಿ ಕೇವಲ 6 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಾರೆ. ಇಂತಹವರು ಕೆಲಸದ ಸಮಯದಲ್ಲಿ ಕೂಡ ನಿದ್ರಿಸುತ್ತಿರುತ್ತಾರೆ. ಅದರಲ್ಲೂ ಕೆಲವು ಆಹಾರಗಳನ್ನು ಸೇವಿಸಿದ ನಂತರವಂತೂ ವಿಪರೀತ ನಿದ್ರೆ ಮಾಡುತ್ತಾರೆ. ಹಾಗಾದ್ರೆ ನಿದ್ರೆ ಮಾಡದೇ ಇರಲು ಸೇವಿಸಬಾರದ 5 ರೀತಿಯ ಆಹಾರಗಳು ಯಾವುವು ಎಂದು ತಿಳಿಯೋಣ ಬನ್ನಿ.

ಪುನರಾವರ್ತಿತ ಊಟವನ್ನು ತಪ್ಪಿಸಿ: ಅನೇಕ ಮಂದಿ ಬೆಳಗ್ಗೆ ಉಪಾಹಾರಕ್ಕಾಗಿ ಸೇವಿಸಿದ ಆಹಾರವನ್ನೇ ಮಧ್ಯಾಹ್ನ ಊಟವಾಗಿ ತಿನ್ನುತ್ತಾರೆ. ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೇ ರೀತಿಯ ಆಹಾರವನ್ನು ಸೇವಿಸಿದರೆ ನಿದ್ರೆ ಬರುವ ಸಾಧ್ಯತೆ ಹೆಚ್ಚು. ಆಗ ಕೆಲಸದ ಕಡೆ ಗಮನ ಹರಿಸಲು ಸಹ ಸಾಧ್ಯವಾಗುವುದಿಲ್ಲ. ಮೇಜಿನ ಮೇಲೆ ಕುಳಿತ ಕಾಲು ಗಂಟೆಯಲ್ಲೇ ನಿದ್ರೆ ಮಾಡಬಹುದು. ಹಾಗಾಗಿ ಆಫಿಸ್ಗೆ ಹೋಗುವವರಂತೂ ಈ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಕರಿದ ಆಹಾರಗಳು ಮತ್ತು ಕೇಕ್ಗಳನ್ನು ತಪ್ಪಿಸಿ: ಕರಿದ ಆಹಾರವನ್ನು ಸಾಧ್ಯವಾದಷ್ಟು ಬಿಡಬೇಕು. ಇವು ತಿನ್ನಲು ಟೇಸ್ಟಿ ಆಗಿರುತ್ತದೆ. ಆದರೆ ಜೀರ್ಣಾವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಮೆದುಳು ನಿಶ್ಚೇಷ್ಟಿತವಾಗುತ್ತದೆ. ಆದ್ದರಿಂದ ನಿದ್ರಿಸುವ ಸಾಧ್ಯತೆಗಳು ಸಹ ಹೆಚ್ಚು. ಕೇಕ್, ಕುಕೀಗಳು, ಬೇಕರಿ ವಸ್ತುಗಳು, ಸಿಹಿ ಬ್ರೆಡ್ ನಿದ್ರೆಯನ್ನು ಉಂಟು ಮಾಡಬಹುದು. ಹಾಗಾಗಿ ನೀವು ಸದಾ ಆ್ಯಕ್ಟಿವ್ ಆಗಿರಬೇಕೆಂದರೆ ಇವುಗಳನ್ನು ತಿನ್ನುವುದನ್ನು ಬಿಡಬೇಕು.

ಅನ್ನ ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ: ಅನ್ನದಲ್ಲಿ ಪಿಷ್ಟವಿದೆ. ಇದು ಗ್ಲೂಕೋಸ್ ಆಗಿ ಬದಲಾಗುತ್ತದೆ. ಪರಿಣಾಮವಾಗಿ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಆಗ ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಪ್ರಮಾಣ ಹೆಚ್ಚುತ್ತದೆ. ಈ ಎರಡು ಹಾರ್ಮೋನ್ಗಳು ದೇಹಕ್ಕೆ ವಿಶ್ರಾಂತಿ ನೀಡಿ ನಿದ್ರೆಯನ್ನುಂಟು ಮಾಡುತ್ತದೆ. ಹಾಗಾಗಿಯೇ ಅನೇಕ ಮಂದಿ ಊಟದ ನಂತರ ನಿದ್ರಿಸುತ್ತಾರೆ. ಅನ್ನದ ಜೊತೆಗೆ, ಓಟ್ಸ್, ಟೊಮೇಟೊ, ಅಣಬೆ, ಪಿಸ್ತಾ, ಮೊಟ್ಟೆ ಇವೆಲ್ಲವನ್ನು ತಿಂದರೆ ನಿದ್ರೆಗೆಡಿಸಬಲ್ಲವು.

ಹೆಚ್ಚಿನ ಪ್ರೋಟೀನ್ ಆಹಾರಗಳು: ಹೆಚ್ಚಿನ ಪ್ರೋಟೀನ್ ಆಹಾರಗಳಾದ ಹಾಲು, ಲೆಟಿಸ್, ಬೀಜಗಳು, ಸೋಯಾ ಉತ್ಪನ್ನಗಳು, ಚಿಕನ್ ಅನ್ನು ಕೆಲಸದ ಸ್ಥಳದಲ್ಲಿ ತಪ್ಪಿಸಬೇಕು. ಇಲ್ಲದಿದ್ದರೆ, ಮನಸ್ಸಿಗೆ ಅಮಲು, ತಲೆತಿರುಗುವಿಕೆ. ಈ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಇದರೊಂದಿಗೆ ದೇಹಕ್ಕೆ ದಣಿವುಂಟಾಗುತ್ತದೆ ಮತ್ತು ವಿಶ್ರಾಂತಿ ಬೇಕು. ಆದ್ದರಿಂದ ಇವುಗಳೊಂದಿಗೆ ಜಾಗರೂಕರಾಗಿರಿ.

ಸಿಹಿ ಆಹಾರಗಳು: ಸಿಹಿತಿಂಡಿಗಳು ಎಲ್ಲಕ್ಕಿಂತ ಮುಖ್ಯ. ಕೆಲವರಿಗೆ ಟೀ ಕುಡಿಯುವುದರಿಂದ ನಿದ್ರೆ ಬರುತ್ತದೆ. ಏಕೆಂದರೆ ಇದರಲ್ಲಿ ಸಕ್ಕರೆಯ ಅಂಶವಿರುತ್ತದೆ. ಹಾಗಾಗಿ ಟೀಗೆ ಬೆಲ್ಲ ಮತ್ತು ಜೇನುತುಪ್ಪ ಸೇರಿಸುವುದು ಉತ್ತಮ.

ಇವುಗಳ ಬದಲಿಗೆ ಕೆಲಸದಲ್ಲಿ ಕ್ರಿಯಾಶೀಲರಾಗಬೇಕಾದರೆ ಸಿಹಿಗೆ ಗುಡ್ ಬೈ ಹೇಳಲೇಬೇಕು


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!