ಕೌಟುಂಬಿಕ ಕಲಹ: ನೇಣಿಗೆ ಶರಣಾದ ಹೆಂಡ್ತಿ: ಪೊಲೀಸರಿಗೆ ಶರಣಾದ ಪತಿ!

0
Spread the love

ತುಮಕೂರು:- ಜಿಲ್ಲೆಯ ಕುಣಿಗಲ್ ತಾಲೂಕಿನ ಕಲ್ಲುಪಾಳ್ಯದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೋರ್ವರು ನೇಣಿಗೆ ಶರಣಾಗಿರುವ ಘಟನೆ ಜರುಗಿದೆ. 26 ವರ್ಷದ ವೀಣಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

Advertisement

ಇನ್ನೂ ಮೃತ ವೀಣಾ ಕುಟುಂಬಸ್ಥರು, ಗಂಡನ ವಿರುದ್ಧ ಕೊಲೆ ಆರೋಪ ಮಾಡಿ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿತ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ವೀಣಾ ಹಾಗೂ ನಾಗರಾಜು ಪ್ರೀತಿಸಿ ಮದುವೆ ಆಗಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ನಾಗರಾಜು ತಮ್ಮ ಹೆಂಡತಿ ಜೊತೆ ಹಲವು ದಿನಗಳ ಕಾಲ ಬೆಂಗಳೂರಿನಲ್ಲಿದ್ದರು. ಇತ್ತೀಚೆಗಷ್ಟೇ ಕಲ್ಲುಪಾಳ್ಯದಲ್ಲಿ ನೆಲೆಸಿದ್ದರು. ನಾಗರಾಜು ಅವರ ತಂದೆ-ತಾಯಿ ನೋಡಿಕೊಳ್ಳುವ ವಿಚಾರವಾಗಿ‌ ಆಗಾಗ ಇವಬ್ಬರ ನಡುವೆ ಜಗಳ ನಡೆಯುತ್ತಿತ್ತು. ಹಲವು ಬಾರಿ ಬುದ್ದಿ ಹೇಳಿದರೂ‌ ಜಗಳ ಮಾಡಿಕೊಳ್ಳುತ್ತಿದ್ರು..

ಮೂರು ದಿನಗಳ ಹಿಂದೆ, ಜಗಳ ವಿಕೋಪಕ್ಕೆ‌ ತಿರುಗಿ ವೀಣಾ ನೇಣಿಗೆ ಶರಣಾಗಿದ್ದಾರೆ. ಈ ವೇಳೆ ಕೂಡಲೇ ಪತಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಗಂಡನೇ ಕೊಲೆ ಮಾಡಿ ಬಳಿಕ ನೇಣು ಬಿಗಿದಿದ್ದಾನೆ ಎಂದು ವೀಣಾ ಪೋಷಕರು ದೂರು ನೀಡಿದ್ದಾರೆ.. ತನ್ನದೇನೂ ತಪ್ಪಿಲ್ಲ ತನಿಖೆಯನ್ನ ಮಾಡಿ ಎಂದು ತಾನೇ ಪೊಲೀಸ್ ಠಾಣೆಗೆ ಪತಿ ನಾಗರಾಜು ಶರಣಾಗಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here