ಮಳೆ ರಗಳೆಗೆ ರೈತರ ಬೆಳೆ ಹಾಳು: ಈರುಳ್ಳಿ ಜಮೀನಿನಲ್ಲಿ ಅಜ್ಜಿ ಗೋಳಾಟ

0
Spread the love

ಗದಗ: ರಾಜ್ಯದ ಹಲವೆಡೆ ನಿರಂತರ ಮಳೆ ರೈತರ ಕಣ್ಣಲ್ಲಿ ನೀರು ತರಿಸಿದೆ. ಹೌದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಗ್ರಾಮದಲ್ಲಿ ನೂರಾರು ಎಕರೆ ಈರುಳ್ಳಿ ಬೆಳೆ ಹಾನಿಯಾಗಿದ್ದು, ಅತಿಯಾದ ಮಳೆಯಿಂದ ಜಮೀನಿನಲ್ಲೇ ಈರುಳ್ಳಿ ಕೊಳೆತು ಹಾಳಾಗಿದೆ.

Advertisement

ಕಷ್ಟಪಟ್ಟು ಬೆಳೆದ ಈರುಳ್ಳಿ ಹಾಳಾಗಿದ್ದು ನೋಡಿ ಅಜ್ಜಿ ದೇವಮ್ಮ ಹಳ್ಳಿ ಗೋಳಾಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಟಾವು ಮಾಡಿದ ಈರುಳ್ಳಿ ಸಂಪೂರ್ಣ ಹಾಳಾಗಿದೆ. 4-5 ಚೀಲ ಆಗೋದು ಕಷ್ಟ ಇದೆ ಎಂದು ಅಜ್ಜಿ ದೇವಮ್ಮ ಕಣ್ಣೀರಿಟ್ಟಿದ್ದಾರೆ.

ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಇಲ್ಲ ಅಂದರೆ ಸಾವೇ ಗತಿ ಎಂದು ಪರಿಹಾರಕ್ಕೆ ಅಜ್ಜಿ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here