ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಣ ಇಲಾಖೆಯ ಕ್ರಮಗಳಿಂದ ನಮ್ಮ ಅಂಜುಮನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 3 ವರ್ಷದಿಂದ ಇಂಗ್ಲೀಷ್ ಮಾಧ್ಯಮದಲ್ಲಿ ತರಗತಿಗಳು ಪ್ರಾರಂಭವಾಗಿದ್ದು, ಇಲ್ಲಿ ಕಲಿಯುತ್ತಿರುವ ಬಡ ಮಧ್ಯಮ ತರಗತಿಯ ಮಕ್ಕಳು ಪಟಪಟನೆ ಇಂಗ್ಲೀಷ್ ಮಾತನಾಡುವದನ್ನು ಹಾಗೂ ಶಾಲೆಯ ಒಂದು ವರ್ಷದ ಸಾಧನೆಯನ್ನು ನೋಡಿದರೆ ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಭಯ ಹುಟ್ಟಿಸುವಂತಿದೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ತಾಜುದ್ದೀನ ಕಿಂಡ್ರಿ ಹೇಳಿದರು.
ಅವರು ಸ್ಥಳೀಯ ಅಂಜುಮನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೈದರ ಖವಾಸ ದಾವೂದ, ಜಮಾಲ್ ಮುನ್ನಾ ಡಾಲಾಯತ, ಮಹ್ಮದರಫೀಕ ದಲೀಲ, ಅಲ್ಲಾಬಕ್ಷಿ ಹೊಂಬಳ, ಖಲಂದರ ಗಾಡಿ, ಮಾಬುಲಿ ದುರ್ಗಿಗುಡಿ, ಜಾಪರ ಕರ್ಕಿಮುಲ್ಲಾ, ಜಿಲಾನಿ ಮಕಾನದಾರ, ಕಿಚಡಿ ಮೇಸ್ತಿç, ಎಸ್ಡಿಎಂಸಿ ಅಧ್ಯಕ್ಷ ಎಲ್.ಎನ್. ಮಕಾನದಾರ, ಮುನ್ನಾ ದುರ್ಗಿಗುಡಿ, ಖಾದರ ಲಾಡಸಾಬನವರ ಸೇರಿದಂತೆ ಶಾಲಾ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.