ಫೆ. 19ರಿಂದ ಕಾಳಿಕಾದೇವಿ ಲಕ್ಷದೀಪೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹೊಸಪೇಟಿ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಲಕ್ಷದೀಪೋತ್ಸವ ಹಾಗೂ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮಗಳು ಫೆ. 19ರಿಂದ 21ರವರೆಗೆ ನಡೆಯಲಿವೆ.

Advertisement

ಫೆ. 19ರಿಂದ ಪ್ರತಿದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಾಳಿಕಾ ದೇವಿ ಹಾಗೂ ಮೌನೇಶ್ವರ ಮೂರ್ತಿಗೆ ಪಂಚಾಮೃತಾಭಿಷೇಕ, ಶೋಡೋಷೋಪಚಾರ ಪೂಜಾ ಅಲಂಕಾರದೊAದಿಗೆ ಮಹಾ ಮಂಗಳಾರತಿ ನೆರವೇರಲಿದೆ. ಸಂಜೆ 6 ಗಂಟೆಗೆ ಮುರನಾಳ ಮಳೇರಾಜೇಂದ್ರಸ್ವಾಮಿ ಮಠದ ಬ್ರಹ್ಮಶ್ರೀ ಜಗನ್ನಾಥ ಸ್ವಾಮಿಗಳ ಸಾನ್ನಿಧ್ಯದಲ್ಲಿ ಗದಗ ವಿರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ಗಿಣಗೇರಾದ ಅಭಿನವ ಶ್ರೀಕಂಠ ಸ್ವಾಮೀಜಿ ಇಳಕಲ್ಲದ ವಿಶ್ವನಾಥ ಸ್ವಾಮೀಜಿ, ಹೊಳೆಆಲೂರಿನ ಯಚ್ಚರೇಶ್ವರ ಸ್ವಾಮೀಜಿ, ಲೇಬಗೇರಿಯ ದಿವಾಕರಸ್ವಾಮೀಜಿ, ನರೇಗಲ್ಲದ ಹಜರತ್ ಮಂಜೂರ ಹುಸೇನ ಶಾವಲಿ ಶರಣರ ಸಮ್ಮುಖದಲ್ಲಿ ನಡೆಯುವ ಸಮಾರಂಭವನ್ನು ಧುರೀಣ ಮಿಥುನ ಪಾಟೀಲ ಉದ್ಘಾಟಿಸುವರು.

ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಮೌನೇಶ ಹೊಸಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಡಾ. ಗಜಾನನ ಕಾಳೆ, ಡಾ. ಬಿ.ಎನ್. ಪಾಟೀಲ, ಶಶಿಕಲಾ ಪಾಟೀಲ, ಪ.ಪಂ ಅಧ್ಯಕ್ಷ ಪಕೀರಪ್ಪ ಮಳ್ಳಿ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಳ್ಳುವರು.

ಫೆ. 21ರ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ನಡೆಯಲಿದ್ದು, ಸಾನ್ನಿಧ್ಯವನ್ನು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂಧಗಿಯ ರಾಮಚಂದ್ರ ಸ್ವಾಮೀಜಿ, ಶಾಡಲಗಿಯ ಸೂರ್ಯನಾರಾಯಣ ಸ್ವಾಮೀಜಿ, ಲೇಬಗೇರಿಯ ನಾಗಮೂರ್ತೇಂದ್ರ ಸ್ವಾಮೀಜಿ, ಚಿಕ್ಕುಂಬಿಯ ಅಭಿನವನಾಗಲಿಂಗ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಉಪಸ್ಥಿತರಿರುವರು.

ಹಂಪಿ ವಿಶ್ವವಿದ್ಯಾಲಯದ ಡಾ. ವೀರೇಶ ಬಡಿಗೇರ ಉಪನ್ಯಾಸ ನೀಡಲಿದ್ದು, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ. ವಸಂತ ಮುರಳಿಆಚಾರ್ಯ ಸಮಾರಂಭದ ಜ್ಯೋತಿ ಬೆಳಗಿಸುವರು. ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡರ, ಲೋಹಶಿಲ್ಪಿ ಹೊನ್ನಪ್ಪಾಚಾರ್ಯ, ಆರ್.ಡಿ. ಕಡ್ಲಿಕೊಪ್ಪ ಉಪಸ್ಥಿತರಿರುವರು ಎಂದು ಶ್ರೀ ಕಾಳಿಕಾದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಪ್ರಕಟಣೆ ತಿಳಿಸಿದೆ.

 

**ಬಾಕ್ಸ್**

ಫೆ. 20ರ ಸಂಜೆ ಶ್ರೀ ಕಾಳಿಕಾ ದೇವಿ ಸಮುದಾಯ ಭವನವನ್ನು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಸಾನ್ನಿಧ್ಯವನ್ನು ಶಾಡಲಗೆರಿಯ ತೀರ್ಥೇಂದ್ರ ಸ್ವಾಮೀಜಿ, ನರಗುಂದದ ಡಾ. ಸಿದ್ಧವೀರ ಶಿವಾಚಾರ್ಯರು, ನವಲಗುಂದದ ವೀರೇಂದ್ರ ಸ್ವಾಮೀಜಿ, ಕೊಪ್ಪಳದ ಶಿರಸಪ್ಪಯ್ಯ ಸ್ವಾಮೀಜಿ, ಶಿರೋಳದ ಅಭಿನವ ಯಚ್ಚರ ಸ್ವಾಮೀಜಿ, ಸಿಂಧೂರಿನ ಮಹಾದೇವ ಶಾಸ್ತಿçಗಳ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ ಉಪಸ್ಥಿತರಿರುವರು. ಧಾರವಾಡ ಕ.ವಿ.ವಿ. ನಿ.ಉಪನ್ಯಾಸಕ ಡಾ. ಕೆ.ಪಿ. ವೀರಣ್ಣ ಉಪನ್ಯಾಸ ನೀಡುವರು.


Spread the love

LEAVE A REPLY

Please enter your comment!
Please enter your name here