Bengaluru Breaking: ಫೈನಾನ್ಸ್ ಕಿರುಕುಳ: ನೇಣಿಗೆ ಶರಣಾದ ಉದ್ಯಮಿ; ದೂರು ಕೊಟ್ಟ ಪತ್ನಿ!

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿ ನಗರದ ಪ್ರಕಾಶ್ ನಗರದಲ್ಲಿ ಫೈನಾನ್ಶಿಯರ್‌ ಕಿರುಕುಳಕ್ಕೆ ನೊಂದು ಉದ್ಯಮಿ ನೇಣಿಗೆ ಶರಣಾದ ಘಟನೆ ಜರುಗಿದೆ.

Advertisement

ಅರುಣ್ ಮೃತ ವ್ಯಕ್ತಿ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ಅರುಣ್ ಸಣ್ಣಪುಟ್ಟ ಉದ್ಯಮ ನಡೆಸಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ತಮ್ಮ ಬಳಿ ಇದ್ದ ಕಾರನ್ನು ದಿನೇಶ್ ಎಂಬ ಫೈನಾನ್ಸಿಯರ್ ಬಳಿ ಅಡವಿಟ್ಟು 6 ಲಕ್ಷ ರೂ. ಹಣ ಪಡೆದಿದ್ದರು.

ದಿನೇಶ್ ಮೃತ ಅರುಣ್‌ಗೆ ಇದೇ ತಿಂಗಳು 22 ರಂದು ಹಣ ಮರುಪಾವತಿಸುವಂತೆ ಹೇಳಿ ಕೊಟ್ಟಿರುತ್ತಾರೆ. ಕೊಟ್ಟ ಡೆಡ್ ಲೈನ್ ಅಷ್ಟರಲ್ಲಿ 6 ಲಕ್ಷ ರೂ. ಹಣ ಹೊಂದಿಸಲು ಆಗಿರಲ್ಲ. 22 ರಂದು 1.5 ಲಕ್ಷ ಹಣ ಹೊಂದಿಸಿಕೊಂಡು ದಿನೇಶ್ ಕೊಡಲು ಹೋಗಿದ್ದಾರೆ. ನಿಗದಿತ ದಿನಾಂಕ ಪೂರ್ತಿ ಹಣ ಕೊಡದೆ ಇದ್ದ ಕಾರಣ ಅರುಣ್‌ಗೆ ನಿಂದಿಸಿ ಹಣ ಕೊಡೋದಕ್ಕೆ ಆಗದೇ ಇದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಕಳಿಸಿದ್ದರು.

ದಿನೇಶ್ ನಡೆಯಿಂದ ನೊಂದಿದ್ದ ಅರುಣ್, ಮನೆಯಲ್ಲಿದ್ದ ಪತ್ನಿಯನ್ನು ಬೇರೆ ಕಡೆಗೆ ಕಳಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here