ಬಳ್ಳಾರಿ:- ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಬಳಿಯ ಚಿನ್ನಾಪೂರ ಗುಡ್ಡದಲ್ಲಿ ಸೋಮವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ. ಮೂರರಿಂದ 4 ಕಿಲೋಮೀಟರ್ ನಷ್ಟು ಬೆಂಕಿ ವ್ಯಾಪಿಸಿರುವ ಹಿನ್ನೆಲೆ ಪ್ರಾಣಿ, ಪಕ್ಷಿ ಸಂಕುಲಕ್ಕೆ ಹಾನಿಯಾಗುವ ಆತಂಕ ಶುರುವಾಗಿದೆ.
Advertisement
ಗುಡ್ಡದಲ್ಲಿ ಕರಡಿ, ಚಿರತೆ, ನವಿಲುಗಳು ಸೇರಿ ಅನೇಕ ಕಾಡು ಪ್ರಾಣಿಗಳಿದ್ದು, ಪ್ರಾಣಿ, ಪಕ್ಷಿ ಸಂಕುಲಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ. ಇನ್ನೂ ಘಟನೆ ನಡೆದ 3 ಗಂಟೆಗಳ ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.