ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸರಾಫ್ ಬಝಾರ್ನ ಅಂಬಾಭವಾನಿ ದೇವಸ್ಥಾನದ ಸಭಾಂಗಣದಲ್ಲಿ ಸಮಾಜದ ಮಹಿಳೆಯರಿಗಾಗಿ ಬೆಂಕಿ ರಹಿತ ಅಡುಗೆ ಸ್ಪರ್ಧೆ, ಸ್ವಯಂ ಕೇಶಾಲಂಕರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾ ಎಸ್.ಕಬಾಡಿ ನಿರ್ಣಾಯಕರಾಗಿ ಆಗಮಿಸಿದ್ದರು. ವಿಜೇತರಾದವರಿಗೆ ಬಹುಮಾನ ಘೋಷಿಸಲಾಯಿತು.
Advertisement
ಈ ಎಲ್ಲಾ ಕಾರ್ಯಕ್ರಮಗಳ ಮುಂದಾಳತ್ವವನ್ನು ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಉಪಾಧ್ಯಕ್ಷೆ ಸ್ನೇಹಾಲತಾ ಕಬಾಡಿ, ಕಾರ್ಯದರ್ಶಿ ರೇಖಾ ಬೇವಿನಕಟ್ಟಿ, ಸಹಕಾರ್ಯದರ್ಶಿ ಗೀತಾ ಹಬೀಬ್ ಮತ್ತು ಖಜಾಂಚಿ ಕಸ್ತೂರಬಾಯಿ ಭಾಂಡಗೆ ವಹಿಸಿಕೊಂಡಿದ್ದರು.
ಮಂಡಳದ ಸದಸ್ಯರಾದ ರೇಣುಕಾಬಾಯಿ ಕಲಬುರ್ಗಿ, ಲಲಿತಾಬಾಯಿ ಬಾಕಳೆ, ಭಾವನಾ ಭಾಂಡಗೆ, ರೇಖಾ ಖಟವಟೆ, ಅನ್ನಪೂರ್ಣಾ ಶಿದ್ಲಿoಗ್, ಸುಶೀಲಾ ದಲಬಂಜನ್, ಶೋಭಾಬಾಯಿ ಭಾಂಡಗೆ, ಶಾಂತಾಬಾಯಿ ಬಾಕಳೆ, ರತ್ನಾಬಾಯಿ ಹಬೀಬ್ ಮತ್ತು ಮಂಜುಳಾ ಬಾಕಳೆ ಹಾಜರಿದ್ದರು.