ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ನಗರ ಮಂಡಲ ಯುವ ಮೋರ್ಚಾ ನೂತನ ತಂಡದ ಪ್ರಥಮ ಸಂಘಟನಾತ್ಮಕ ಸಭೆಯು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರಡಗಿ ಅವರ ನೇತೃತ್ವದಲ್ಲಿ, ಪಕ್ಷದ ಹಿರಿಯರಾದ ಎಂ.ಎಸ್. ಕರೀಗೌಡ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಗದಗ ನಗರ ಯುವ ಮೋರ್ಚಾ ಕಾರ್ಯದರ್ಶಿ ಧರ್ಮರಾಜ ಕೊಂಚಿಗೇರಿ, ಕಿರಣ ಕಲಾಲ, ಗದಗ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನವೀನ ಕೊಟೆಕಲ್, ಪ್ರಧಾನ ಕಾರ್ಯದರ್ಶಿಗಳಾದ ವಿರೇಶಪ್ರಭು ಗದಗಿನ, ಬಸವರಾಜ ನರೇಗಲ್, ಉಪಾಧ್ಯಕ್ಷರಾದ ಕೃಷ್ಣಾ ಚಿಂತಾ, ಪ್ರವೀಣ ಹಡಪದ, ಆಕಾಶ ಪಾಟೀಲ, ಕಾರ್ಯದರ್ಶಿಗಳಾದ ಶಶಿಧರ ಕಳ್ಳಿ, ರಜತ್ ಭಿಮ್ಕರ್, ಮೋಹನ ವರವಿ, ಚಂದ್ರು ಒಂಟೆತ್ತಿನವರ, ಕಾರ್ತಿಕ ಶಿಗ್ಲಿಮಠ, ಸದಸ್ಯರಾದ ವಿನಾಯಕ ಕಾಟ್ವಾ, ವಿನಾಯಕ ಹೊರಕೇರಿ, ಅಕ್ಷಯ ರೆವಣಕರ್, ಸಂತೋಷ ರಾಮದುರ್ಗ, ಆನಂದ ಬಂಡಿ, ಬಸವರಾಜ ಮಡಿವಾಳರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.