ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಂಸ್ಕೃತಿಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ದಿನನಿತ್ಯದ ಬದುಕು, ಹಬ್ಬ ಹರಿದಿನಗಳು, ಕೃಷಿ ಚಟುವಟಿಕೆಗಳು, ಭಕ್ತಿ ಭಾವ, ಪೌರಾಣಿಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ಒಟ್ಟಾರೆ, ಇದು ಜೀವನ ಮೌಲ್ಯಗಳ ಹೂರಣದಿಂದ ಕೂಡಿದೆ ಎಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ದಿ. ನಾರಾಯಣಭಟ್ ಶಿವಪೂರ ಅವರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ “ಯುವಜನತೆ ಮತ್ತು ಜನಪದ ಸಾಹಿತ್ಯ” ಕುರಿತು ಮಾತನಾಡಿದರು.
ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ನಾರಾಯಣಭಟ್ ಶಿವಪೂರ ಅವರ ಸಂಸ್ಮರಣೆ ಮಾಡಿ, ಶ್ರಮ ಸಂಸ್ಕೃತಿಯ ಮೂಲಕ ಗದಗ ಪರಿಸರದಲ್ಲಿ ಹೊಟೇಲ್ ಉದ್ಯಮವನ್ನು ಪ್ರಾರಂಭಿಸಿ ಮಾದರಿ ಜೀವನ ನಡೆಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.
ನಾರಾಯಣಭಟ್ ಶಿವಪೂರ ಅವರ ಸಾಮಾಜಿಕ ಸೇವೆಯ ಕುರಿತು ಡಾ. ಆರ್.ಎನ್. ಗೋಡಬೋಲೆ, ಡಾ. ವಾಣಿ ಶಿವಪೂರ ಹಾಗೂ ಡಾ. ಅನಂತ ಶಿವಪೂರ ಮಾತನಾಡಿದರು.
ಈ ಸಂದರ್ಭದಲ್ಲಿ ಅಶೋಕ ಹಾದಿ ಅವರನ್ನು ಗೌರವಿಸಲಾಯಿತು. ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಆರ್.ಡಿ. ಕಪ್ಪಲಿ, ಬಿ.ಬಿ. ಹೊಳಗುಂದಿ, ರತ್ನಕ್ಕ ಪಾಟೀಲ, ರಾಜೇಶ್ವರಿ ಬಡ್ನಿ, ಉಮಾದೇವಿ ಕಣವಿ, ಬಸವರಾಜ ಗಣಪ್ಪನವರ, ಯಲ್ಲಪ್ಪ ಹಂದ್ರಾಳ, ಪ್ರಸನ್ನಕುಮಾರ ಇನಾಮದಾರ, ಚಂದ್ರಶೇಖರ ಐಲಿ, ರಾಜಶೇಖರ ಕರಡಿ, ಮಲ್ಲಿಕಾರ್ಜುನ ನಿಂಗೋಜಿ, ಜೆ.ಎ. ಪಾಟೀಲ, ಅಶೋಕ ಸತ್ಯರೆಡ್ಡಿ, ಗಂಗವ್ವ ಮುದಗಲ್, ಚನವೀರಪ್ಪ ದುಂದೂರ, ಸತೀಶ ಕುಲಕರ್ಣಿ, ಬಿ.ಎಸ್. ಹಿಂಡಿ, ಶರಣಪ್ಪ ಹೊಸಂಗಡಿ, ಬಸವರಾಜ ನೆಲಜೇರಿ, ಅಂಬಿಕಾ ಶಿವಪೂರ, ಸತೀಶಕುಮಾರ ಚನ್ನಪ್ಪಗೌಡ್ರ, ಕೆ.ಎನ್. ಶಿವಪೂರ, ಕಾರ್ತಿಕ ಶಿವಪೂರ, ಸರಸ್ವತಿ ಶಿವಪೂರ, ಎಂ.ಎಫ್. ಡೋಣಿ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ:
“ಶಿಷ್ಠ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವನಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ ವಿಶಿಷ್ಟವಾದುದು. ಜಾನಪದ ಪ್ರಕಾರಗಳ ಕಲಿಕೆ ಶಿಕ್ಷಣದ ಒಂದು ಭಾಗವಾಗಿ ಸರ್ಕಾರ ಅಳವಡಿಸಿದಾಗ ಇಂದಿನ ಪೀಳಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.