ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಜೀವ ಅತ್ಯಮೂಲ್ಯವಾಗಿದ್ದು, ಮಕ್ಕಳು, ಸಾರ್ವಜನಿಕರು, ವಾಹನ ಸವಾರರು ಸೇರಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿದು ಪಾಲಿಸಬೇಕು ಎಂದು ಗದಗ ಆರ್‌ಟಿಓ ಬಾಲಚಂದ್ರ ಹೆಚ್.ಟಿ. ಹೇಳಿದರು.

Advertisement

ಅವರು ಬುಧವಾರ ರಾಷ್ಟ್ರೀ ಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಪಟ್ಟಣದ ಎಂಜಿಎA ಯೂನಿವರ್ಸಲ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಜಾಗೃತಿ ಕಾರ್ಯಕ್ರಮ ಮಾಡುತ್ತಲೇ ಇರುತ್ತದೆ. ರಸ್ತೆ ಸುರಕ್ಷತೆಯು ಪ್ರತಿ ಮಗುವೂ ಕಲಿಯಲೇಬೇಕಾದ ಅತ್ಯಗತ್ಯ ಜೀವನ ಕೌಶಲ್ಯವಾಗಿದೆ. ಅವರು ಶಾಲೆಗೆ ನಡೆದುಕೊಂಡು ಹೋಗುತ್ತಿರಲಿ, ಬೈಸಿಕಲ್ ಸವಾರಿ ಮಾಡುತ್ತಿರಲಿ ಅಥವಾ ಹೊರಗೆ ಆಟವಾಡುತ್ತಿರಲಿ ಇನ್ನೂ ಅನೇಕ ಸಂದರ್ಭಗಳಲ್ಲಿ ಮಕ್ಕಳು ಯಾವ ರೀತಿ ಸುರಕ್ಷತಾ ಕ್ರಮ ಅನುಸರಿಬೇಕು ಎಂಬ ಬಗ್ಗೆ ತಿಳಿಸಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಜವಾಬ್ದಾರಿ ಮೂಡುತ್ತದೆ ಎಂದು ತಿಳಿಸಿದರು.

ಗುರುರಾಜ ಪಾಟೀಲ ಕುಲಕರ್ಣಿ ಮಾತನಾಡಿ, ಸಣ್ಣಪುಟ್ಟ ತಪ್ಪಿನಿಂದ, ತಾತ್ಸಾರ, ಬೇಜವಾಬ್ದಾರಿ ಹಾಗೂ ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡುವುದರಿಂದಾಗಿ ದೊಡ್ಡ ಅನಾಹುತ ಉಂಟಾಗಿ ಸಾವು-ನೋವು ಸಂಭವಿಸುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ಅತಿ ವೇಗ ಅವಸರಕ್ಕೆ ಕಾರಣ, ಚಾಲನೆ ಮಾಡುವಾಗ ಸಂಕೇತಗಳನ್ನು ಪಾಲಿಸಬೇಕು, ಸೀಟ್ ಬೆಲ್ಟ್ ಬಳಸಬೇಕು, ಮುಖ್ಯವಾಗಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಲೇಬಾರದು ಎಂದರು.

ಈ ವೇಳೆ ಗುರುರಾಜ ಪಾಟೀಲ ಕುಲಕರ್ಣಿ, ಡಾ. ಆಯ್.ಎಫ್. ಮುದಗಲ್, ಮುಖ್ಯೋಪಾಧ್ಯಾಯೆ ಕವಿತಾ ಮೆಣಸಗಿ ಸೇರಿ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here