ವಾಲ್ಮೀಕಿ ಜನಾಂಗಕ್ಕೆ ಮಾಜಿ ಸಚಿವ ನಾಗೇಂದ್ರ ದ್ರೋಹ ಬಗೆದಿದ್ದಾರೆ: ಜನಾರ್ದನ ರೆಡ್ಡಿ

0
Spread the love

ಬಳ್ಳಾರಿ: ವಾಲ್ಮೀಕಿ ಜನಾಂಗಕ್ಕೆ ಮಾಜಿ ಸಚಿವ ನಾಗೇಂದ್ರ ಅವರು ದ್ರೋಹ ಬಗೆದಿದ್ದಾರೆ ಎಂದು ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ ವಾಲ್ಮೀಕಿ ನಿಗಮದಲ್ಲಿ ಅದೇ ಸಮುದಾಯದ ವ್ಯಕ್ತಿಯಾಗಿ ಆ ಜನಾಂಗಕ್ಕೆ ಮಾಜಿ ಸಚಿವ ನಾಗೇಂದ್ರ ಅವರು ದ್ರೋಹ ಬಗೆದಿದ್ದಾರೆ. ಹಗರಣದಲ್ಲಿ ಬಂಧಿಯಾಗಿ ಬಿಡುಗಡೆಯಾದ ಶಾಸಕ ನಾಗೇಂದ್ರ ಅವರು ಇಡಿ ಪ್ರಕರಣದಲ್ಲಿ ಎ೧ ಆಗಿದ್ದಾರೆ.

Advertisement

ನಿಗಮದ ಹಣದಲ್ಲಿ ವಿಮಾನ ಪ್ರಯಾಣ ಭತ್ಯ, ಕೋಟ್ಯಾಂತರ ಮೌಲ್ಯದ ಕಾರು ಖರೀದಿ, ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ 200ರೂ.ನಂತೆ ಮೂವರು ಶಾಸಕರ ಮೂಲಕ ಒಟ್ಟ14.80ಕೋಟಿ ರೂ. ಸೇರಿ 20ಕೋಟಿ ರೂ.

ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಇಡಿ ಚಾಜ್೯ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಅವರು ಬ್ಯಾಂಕ್ ನವರು ಮಾಡಿದ ಹಗರಣವೆಂದು ಹೇಳಿದ್ದು ನಾಚಿಕೆಗೇಡು ವಿಷಯವಾಗಿದೆ ಎಂದು ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here