ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ತಂಗಿ ಅಂತ ನಂಬಿಸಿ ಖತರ್ನಾಕ್ ದಂಪತಿ ಚಿನ್ನದ ವ್ಯಾಪಾರಿಗಳಿಗೆ ಕೋಟಿ ಕೋಟಿ ನಾಮ ಹಾಕಿರುವ ಆರೋಪ ಕೇಳಿ ಬಂದಿರುವ ವಿಚಾರ ಎಲ್ಲಾರಿಗೂ ಗೊತ್ತೇ ಇದೆ. ಇದೀಗ ಐಶ್ವರ್ಯ ಗೌಡ @ ನವ್ಯಶ್ರೀಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
Advertisement
ಆರೋಪಿ ಐಶ್ವರ್ಯಗೌಡ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು ಪತ್ತೆಯಾಗಿದ್ದು, ಕೋಟ್ಯಾಂತರ ಹಣ ವಹಿವಾಟು ಪತ್ತೆಯಾಗಿವೆ. ಈ ಹಲವು ದಾಖಲೆಗಳು ಸಿಕ್ಕಿರುವುದರಿಂದ ಪ್ರಕರಣದ ತನಿಖಾಧಿಕಾರಿ ಭರತ್ ರೆಡ್ಡಿ ಅವರು ಐಶ್ವರ್ಯಳ ಹಣ ವರ್ಗಾವಣೆ ಪರಿಶೀಲಿಸುವಂತೆ ಇಡಿ ಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಭರತ್ ರೆಡ್ಡಿ ಅವರು ಐಟಿ ಅಧಿಕಾರಿಗಳಿಗೂ ಪತ್ರ ಬರೆದಿದ್ದರು. ಇದೀಗ ಇಡಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಐಶ್ವರ್ಯಗೆ ಡಬಲ್ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.