ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗದಗ-ಬೆಟಗೇರಿ ನೌಜವಾನ ಯಂಗ್ ಕಮಿಟಿ ಹಾಗೂ ಹಿಂದ್ ಎಜ್ಯುಕೇಶನ್ ಅಸಿಸ್ಟೆನ್ಸ್ ಟ್ರಸ್ಟ್ ಸಹಯೋಗದಲ್ಲಿ ಗದಗ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಉಚಿತ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮವನ್ನು ನಗರದ ಕರ್ನಾಟಕ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. 156 ಮಕ್ಕಳಿಗೆ ಸುನ್ನತೆ ಇಬ್ರಾಹಿಂ (ಖತ್ನಾ) ಯಶಸ್ವಿಯಾಗಿ ನೆರವೇರಿಸಲಾಯಿತು.
ಖಾಸಗಿ ಆಸ್ಪತ್ರೆಗೆಯಲ್ಲಿ ಈ ಸುನ್ನತೆ (ಖತ್ನಾ) ಮಾಡಲು ಒಬ್ಬರಿಗೆ 5-8 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಆದರೆ ನಗರದ ಗದಗ-ಬೆಟಗೇರಿ ನೌಜವಾನ ಯಂಗ್ ಕಮಿಟಿ ಹಾಗೂ ಹಿಂದ್ ಎಜ್ಯುಕೇಶನ್ ಅಸಿಸ್ಟೆನ್ಸ್ ಟ್ರಸ್ಟ್ ಸದಸ್ಯರು 156 ಮಕ್ಕಳಿಗೆ ಸುನ್ನತೆಯನ್ನು ಉಚಿತವಾಗಿ ಮಾಡಿದ್ದಾರೆ.
ಡಾ. ಎಂ.ಡಿ. ಸಾಮುದ್ರಿ ನೇತೃತ್ವದಲ್ಲಿ ಹಿರಿಯ ಶಸ್ತ್ರಚಿಕಿತ್ಸಕ ಡಾ. ಯೂನಸ್ ಸೋಲಂಕಿ, ಡಾ. ಶಿವಪುತ್ರ ಬಾಲರೆಡ್ಡಿ, ಡಾ. ವಿಜಯಕುಮಾರ ಹಳ್ಳಿ, ಡಾ. ವಿನೋದ ಮೋರಾಳೇ, ಡಾ. ವಿಕ್ರಮ ಪಾಟೀಲ, ಡಾ. ವಿಕ್ರಾಂತ ಶರ್ಮಾ, ಡಾ. ರಾಜುಕುಮಾರ ವಾಲಿ, ಡಾ. ನಟರಾಜ ಸೇರಿದಂತೆ ನುರಿತ ತಜ್ಞ ವೈದ್ಯರು, ಹೊರ ರಾಜ್ಯದ ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುವ ನಾಯಕ ಕೃಷ್ಟಗೌಡ ಪಾಟೀಲ, ಮದರ್ ಖಾಜಿ, ದಾದಾಪೀರ, ಎಂ.ಸಿ. ಶೇಖ್, ಬಾಷಾಸಾಬ್ ಮಲ್ಲಸಮುದ್ರ, ಇಕಬಾಲ್ ಹಣಗಿ ಹಾಗೂ ಇತರರು ಹಾಜರಿದ್ದರು.