ವಿಜಯಸಾಕ್ಷಿ ಸುದ್ದಿ, ಗದಗ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ಅನುಕೂಲಕರವಾಗಿದ್ದು, ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತವೆ ಎಂದು ಕಪ್ಪತ್ತಗುಡ್ಡ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹೇಳಿದರು.
ಅವರು ಪಂಚಾಕ್ಷರಿ ಗವಾಯಿಗಳ 81ನೇ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ನಿಮಿತ್ತ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಡಾ. ಅಜಯ ಮತ್ತು ಡಾ. ಕಾವ್ಯ ಬಸರಿಗಿಡದ ದಂಪತಿಗಳು ಏರ್ಪಡಿಸಿದ್ದ 16ನೇ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ಡಾ. ಕಾವ್ಯ ಮತ್ತು ಡಾ. ಅಜಯ ಬಸರಿಗಿಡದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರಶಂಸಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಮಾಣಿÀಕೇಶ್ವರಿ ಆಶ್ರಮದ ಶಿವಶರಣೆ ನಂದೀಶ್ವರಿ ಅಮ್ಮನವರು ಆಶ್ರಮಕ್ಕೆ ಆಶ್ರಮ ನೀಡಿದ ಮಹಾದಾನಿ ವೀರಪ್ಪ ಬಸರಿಗಿಡದವರ ಮರಿಮೊಮ್ಮಗ ಡಾ. ಅಜಯ ಬಸರಿಗಿಡದರು ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಡಾ. ಪ್ರಕಾಶ ಬಸರಿಗಿಡದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಹೇಮರಾಜಶಾಸ್ತಿç, ಜಿ. ರಮೇಶ ಆದೋನಿ, ಬಾಗಲಕೋಟೆಯ ವಿದ್ಯಾವರ್ಧಕ ಸಂಘದ ಮೆಡಿಕಲ್ ಕಾಲೇಜಿನ ಚೇರಮನ್ ಅಶೋಕ ಸಜ್ಜನ ಬೇವೂರ ಉಪಸ್ಥಿತರಿದ್ದರು. ಡಾ. ಕಾವ್ಯ ಮತ್ತು ಡಾ. ಅಜಯ ಬಸರಿಗಿಡದ ನೂರಕ್ಕೂ ಹೆಚ್ಚು ರೋಗಿಗಳನ್ನು ತಪಾಸಿಸಿ ಉಚಿತ ಔಷಧಿ ವಿತರಣೆ ಮಾಡಿದರು.