IPL 2025: RCB ಕಪ್ ಗೆದ್ರೆ ಎಲ್ಲಾ ಇಂದಿರಾ ಕ್ಯಾಂಟೀನ್’ಗಳಲ್ಲೂ ಉಚಿತ ಹೋಳಿಗೆ ಊಟ..!

0
Spread the love

ಮೈಸೂರು: ನಾಳೆ ಐಪಿಎಲ್​​ ಫೈನಲ್​​ ಪಂದ್ಯಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಈಗಾಗಲೇ ಪಂದ್ಯದ ಜೋಶ್​​ ಎಲ್ಲ ಕಡೆ ಹರಿದಾಡುತ್ತಿದೆ. ಬೆಂಗಳೂರಿನಲ್ಲೂ ನಾಳಿನ ಫೈನಲ್​ ಪಂದ್ಯ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೇ 29 ರಂದು ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್​ಸಿಬಿ ಪಡೆ ಮತ್ತೊಮ್ಮೆ ಫೈನಲ್​ಗೆ ಲಗ್ಗೆಯಿಟ್ಟಿತ್ತು.

Advertisement

ಅಂದರೆ 2016 ರಲ್ಲಿ ಮೇ 29 ರಂದು ನಡೆದ ಫೈನಲ್​ನಲ್ಲಿ ಸೋತಿದ್ದ ಆರ್​ಸಿಬಿ, 2025ರ ಮೇ 29 ರಂದೇ ಫೈನಲ್​ಗೇರುವಲ್ಲಿ ಯಶಸ್ವಿಯಾಗಿತ್ತು. ಇದೀಗ ನಾಳೆ ಆರ್​​ಸಿಬಿ  ಫೈನಲ್​ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಇದರ ನಡುವೆ ನಾಳಿನ ಆರ್​​ಸಿಬಿ ಮತ್ತು ಪಂಜಾಬ್​ ನಡುವಿನ ಪಂದ್ಯದಲ್ಲಿ ಆರ್​​ಸಿಬಿ ಕಪ್​ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಲಿದ್ದಾರೆ. ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ‌ ಘೋಷಣೆ ಮಾಡಿದ್ದಾರೆ. ಮತ್ತು ಇದರ ಸಾಂಕೇತಿಕವಾಗಿ ಇವತ್ತೇ ಉಚಿತ‌ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.

ಹೌದು ನಾಳೆ‌ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ. ಇತ್ತ ಸಿಎಂ ಸಿದ್ದರಾಮಯ್ಯ ಬಳಿ ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ‌ ಮನವಿ ಮಾಡಿದ್ದಾರೆ. ಆರ್​​ ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ‌‌ ಉಚಿತ ಹೋಳಿಗೆ ಊಟ ಹಾಕಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here