ಪಟಾಕಿ ಸಿಡಿಸೋ ವಿಚಾರಕ್ಕೆ ಸ್ನೇಹಿತರ ಚಾಲೆಂಜ್: ದೀಪಾವಳಿ ದಿನವೇ ಯುವಕ ಬಲಿ!

0
Spread the love

ಬೆಂಗಳೂರು :- ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವಿಚಾರಕ್ಕೆ ಚಾಲೆಂಜ್ ಮಾಡಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ನಗರದ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ಜರುಗಿದೆ.

Advertisement

ಶಬರಿ ಸಾವನ್ನಪ್ಪಿದ ಯುವಕ. ಯುವಕರ ಹುಚ್ಚಾಟ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕರು ಶಬರಿ ಜೊತೆ ಚಾಲೆಂಜ್ ಮಾಡುತ್ತಾ ಡಬ್ಬವೊಂದರಲ್ಲಿ ಪಟಾಕಿ ಇರಿಸಿ ಅದರ ಮೇಲೆ ಯುವಕನನ್ನು ಕೂರಿಸಿದ್ದಾರೆ.‌ ನಂತರ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲಾ ಓಡಿದ್ದಾರೆ. ಪಟಾಕಿ ಸ್ಪೋಟಗೊಂಡು ಶಬರಿ ದೇಹದ ಹಿಂಬದಿಗೆ ತೀವ್ರ ಗಾಯವಾಗಿತ್ತು.

ಅಕ್ಟೋಬರ್ 31ರ ರಾತ್ರಿ ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಬರಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೇ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ.

ಹುಡುಗರ ಹುಚ್ಛಾಟದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ವೇಳೆ ಪಟಾಕಿ ಡಬ್ಬದ ಮೇಲೆ ಕುಳಿತು ಪಟಾಕಿ ಸ್ಫೋಟದ ಬಳಿಕವೂ ನೀನು ಎದ್ದು ನಿಂತರೆ ಆಟೋ ನೀಡುತ್ತೇವೆ ಎಂದು ಸ್ನೇಹಿತರು ಚಾಲೆಂಜ್‌ ಮಾಡಿದ್ದ ವಿಚಾರ ಶಾಕಿಂಗ್‌ ವಿಚಾರ ಬಯಲಾಗಿದೆ.

ಸದ್ಯ ಆರು ಮಂದಿ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಬಂಧಿಸಿ ತನಿಖೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here