HomeGadag Newsನ.23ರಿಂದ ಡಿ. 1ರವರೆಗೆ ಶರಣೆ ದಾನಮ್ಮ ದೇವಿಯ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮ

ನ.23ರಿಂದ ಡಿ. 1ರವರೆಗೆ ಶರಣೆ ದಾನಮ್ಮ ದೇವಿಯ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನ. 23ರಿಂದ ಡಿ. 1ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಶ್ರೀ ಶರಣೆ ದಾನಮ್ಮದೇವಿಯ 18ನೇ ವರ್ಷದ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಶ್ರೀ ವೀರಭದ್ರ ದೇವಸ್ಥಾನ ಟ್ರಸ್ಟ ಕಮಿಟಿ, ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ ಕಮಿಟಿ ಹಾಗೂ ದಾನೇಶ್ವರಿ ಮಹಿಳಾ ಮಂಡಳ, ಯುವಕ ಮಂಡಳದ ಸಂಯುಕ್ತ ಆಶ್ರಯದಲ್ಲಿ ಜರುಗಲಿರುವ ಪುಟ್ಟರಾಜ ಕವಿ ಗವಾಯಿಗಳವರು ವಿರಚಿತ ದಾನಮ್ಮದೇವಿ ಪುರಾಣ ಪ್ರವಚನ ಮಾಲಿಕೆಗೆ ಅಡ್ನೂರ-ರಾಜೂರ ಗದುಗಿನ ಬ್ರಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನ. 23ರಂದು ಸಂಜೆ 6 ಗಂಟೆಗೆ ಉದ್ಘಾಟನೆ ನೆರವೇರಿಸಿ ಸಮಾರಂಭದ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂತೋಷ ಕೊಡೇಕಲ್, ಬಿ.ಡಿ. ಕಿಲಬನವರ, ಡಾ. ಕಲ್ಲೇಶ ಮೂರಶಿಳ್ಳಿ ಆಗಮಿಸುವರು. ಬೆಳ್ಳಟ್ಟಿ-ಗದುಗಿನ ವೇ.ಫಕೀರೇಶ್ವರ ಶಾಸ್ತ್ರೀಗಳು ಹಿರೇಮಠ ಅವರ ಪುರಾಣ ಪ್ರವಚನಕ್ಕೆ ಹಿರಿಯ ಕಲಾವಿದ ವೀರೇಶ ಕಿತ್ತೂರ, ಶಾಮರಾವ ಪುಲಾರೆ ಅವರ ಸಂಗೀತವಿದೆ.

ನ. 24ರಂದು ಸಂಜೆ 6 ಗಂಟೆಗೆ ಶರಣೆ ದಾನಮ್ಮತಾಯಿಯ ತೊಟ್ಟಿಲೋತ್ಸವ, ನಾಮಕರಣ ಸಮಾರಂಭದ ಅಧ್ಯಕ್ಷತೆಯನ್ನು ಲಲಿತಾ ತಡಸದ ವಹಿಸುವರು. ಅತಿಥಿಗಳಾಗಿ ಸಾವಿತ್ರಿ ಬೇವಿನಮರದ, ಪುಷ್ಪಾವತಿ ಬಳ್ಳಾರಿ, ವಿಜಯಲಕ್ಮೀ ಬೆಂಗಳೂರು, ಸುರೇಖಾ ಪಿಳ್ಳಿ, ಮಹಾನಂದ ಯಂಡಿಗೇರಿ ಆಗಮಿಸುವರು.

ನ24ರಂದು ಸಂಜೆ 6 ಗಂಟೆಗೆ ಶರಣೆ ದಾನಮ್ಮ ತಾಯಿ ಹಾಗೂ ಸೋಮಲಿಂಗ ವಿವಾಹ ಸಮಾರಂಭವನ್ನು ಗಂಗಾಧರ ಹಿರೇಮಠ ನೆರವೇರಿಸುವರು. ಅಧ್ಯಕ್ಷತೆಯನ್ನು ಶೋಭಾ ಗುಗ್ಗರಿ ವಹಿಸುವರು. ಅತಿಥಿಗಳಾಗಿ ಶಿವಲೀಲಾ ತಡಸದ, ಶಾರದಾ ಸಂಬರಗಿ, ಲಕ್ಷ್ಮೀ ಗುರಿಕಾರ, ಸುಧಾ ಕೆರೂರ, ಮಂಜುಳಾ ಡಂಬಳ, ರೂಪಾ ಯಂಡಿಗೇರಿ ಆಗಮಿಸುವರು.

ದೇವಸ್ಥಾನದ ಟ್ರಸ್ಟಿಗಳಾದ ರಾಚಪ್ಪ ಮಿಣಜಗಿ, ಶಿವಬಸಪ್ಪ ಯಂಡಿಗೇರಿ, ಪ್ರದೀಪ ಕೊಡೇಕಲ್, ಜಗದೀಶ ಯಚ್ಚಲಗಾರ, ಶಿವಕುಮಾರ ಬೇವಿನಮರದ, ಶಂಭು ಕಾರದಕಟ್ಟಿ, ಸುರೇಶ ಶಿರಗಣ್ಣವರ, ಅರುಣಕುಮಾರ ಮುನವಳ್ಳಿ, ಪುರಾಣ ಸಮಿತಿಯ ಅಧ್ಯಕ್ಷೆ ಲಲಿತಾ ತಡಸದ, ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್, ಸುರೇಖಾ ಪಿಳ್ಳಿ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾತರಕಿ, ಶೋಭಾ ಗುಗ್ಗರಿ ಉಪಸ್ಥಿತರಿರುವರು.

ಬಸವೇಶ್ವರ ನಗರದ ಸಮಾಳ ಮೇಳ ಯುವಕ ತಂಡದವರಿಂದ ನಂದಿಕೋಲ, ಕರಡಿ ಮಜಲು ಜರುಗಲಿದ್ದು, ಭಕ್ತಾಧಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಬೇಕೆಂದು ಅಧ್ಯಕ್ಷೆ ಲಲಿತಾ ತಡಸದ, ಕಾರ್ಯದರ್ಶಿ ವಿಜಯಲಕ್ಷ್ಮೀ ಕಾತರಕಿ ವಿನಂತಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!