ಗದಗ: ಬಾಂಗ್ಲಾ ಮುಸ್ಲಿಂ ನುಸುಳುಕೋರರನ್ನು ಹೊರ ಹಾಕುವಂತೆ ಪ್ರತಿಭಟನೆ

0
Spread the love

ಗದಗ: ಬಾಂಗ್ಲಾದೇಶದ ಮುಸ್ಲಿಂ ನುಸುಳುಕೋರರನ್ನು ಹೊರ ಹಾಕುವಂತೆ ಆಗ್ರಹಿಸಿ ಶ್ರೀರಾಮಸೇನೆಯಿಂದ ಗದಗ ಎಸ್ ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯಲ್ಲಿರುವ ಬಾಂಗ್ಲಾ ಮುಸ್ಲಿಂ, ರೊಹಿಂಗ್ಯಾ ಮುಸ್ಲಿಂ ನುಸುಳುಕೋರರನ್ನು ಪತ್ತೆ ಹಚ್ಚಿ ಹೊರ ಹಾಕಬೇಕೆಂದು ಆಗ್ರಹಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯವಾಗಿದ್ದು,

Advertisement

ಹಿಂದೂಗಳ ಮೇಲೆ ಅಮಾನುಶ ದೌರ್ಜನ್ಯ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳ ನಾಶ, ಹಿಂದೂ ಮನೆಗಳ ಲೂಟಿ ನಡೆಯುತ್ತಿದೆ, ಬೆಂಕಿ ಹಚ್ಚಲಾಗ್ತಿದೆ. ಅದಲ್ಲದೆ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿ, ಭೀಕರ ಹತ್ಯೆಗಳನ್ನು ಮಾಡಲಾಗ್ತಿದೆ. ಆದ್ದರಿಂದ ಕೂಡಲೇ ಬಾಂಗ್ಲಾ ನುಸುಳುಕೋರರನ್ನು ಗಡಿಪಾರು ಮಾಡಬೇಕು. ತಪ್ಪಿದ್ರೆ ಹಿಂದೂಗಳ ರಕ್ಷಣೆಗಾಗಿ ಶ್ರೀ ರಾಮ ಸೇನೆ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here