ವಿಜಯಸಾಕ್ಷಿ ಸುದ್ದಿ, ಗದಗ : ನದಾಫ ಪಿಂಜಾರ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯ ವಾಗಿ ಅಭಿವೃದ್ಧಿ ಹೊಂದಲು ಸರಕಾರದಿಂದ ಮೀಸಲಾತಿ ಮತ್ತು ಗುರುತಿಸುವಿಕೆ ಬಹಳ ಮುಖ್ಯವಾಗಿದೆ. ಕಳೆದ ಐದು ವರುಷಗಳ ಅವಧಿಯಲ್ಲಿ ಸರಕಾರದೊಂದಿಗೆ ನಿರಂತರ ನಿವೇದನೆ ಮತ್ತು ಸಂಘದ ಸಾಮೂಹಿಕ ಹೋರಾಟದ ಫಲದಿಂದ ಕರ್ನಾಟಕ ನದಾಫ ಪಿಂಜಾರ ನಿಗಮ ಸ್ಥಾಪನೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನದಾಫ ಪಿಂಜಾರ ಅಧ್ಯಯನ ಪೀಠವಾಗಲು ಸಾಧ್ಯವಾಯಿತು ಎಂದು ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ರಾಜ್ಯಧ್ಯಕ್ಷ ಹೆಚ್ ಜಲೀಲಸಾಬ ಮಾಹಿತಿ ನೀಡಿದರು.
ಅವರು ಗದಗ ನಗರದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ, ಅವರು 2019-2024ರ ಅವಧಿಯಲ್ಲಿ ಸಂಘದ ರಾಜ್ಯ ಘಟಕದಿಂದ ವಿದ್ಯಾರ್ಥಿಗಳಿಗೆ ಮಾಡಿದ ಶೈಕ್ಷಣಿಕ ಸಹಾಯ, ಕಟ್ಟಡ ಅಭಿವೃದ್ಧಿ, ಸರಕಾರದಿಂದ ಪಡೆದ ಅನುದಾನ, ಹೆಚ್. ಇಬ್ರಾಹಿಂ ಸಾಹೇಬರವರ ಹೆಸರಲ್ಲಿ ನೀಡಿದ ಪ್ರಶಸ್ತಿ, ಸಮಾಜದ ಸಂಘಟನೆಗಾಗಿ ಮಾಡಿದ ಬೈಲಾ ತಿದ್ದುಪಡಿ ಕಾರ್ಯಗಳು ಮತ್ತು ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಜ.ದಾದಾ ಖಲಂದರ ಸಾಹೇಬ, ಗದಗ ಜಿಲ್ಲಾ ಅಧ್ಯಕ್ಷ ಕೆ.ಎಫ್. ಹಲ್ಯಾಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಮನ್ ಫರ್ಜಾನಾ ಮತ್ತು ಶಹಾಬುದ್ದಿನ್ ಟೋಪಿವಾಲೆ, ಗದಗ ಜಿಲ್ಲಾ ಉಪಾಧ್ಯಕ್ಷ ಬಿ.ಪಿ. ಅತ್ತಿಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಮಾಮಸಾಬ ಹುಬ್ಬಳ್ಳಿ, ಗದಗ-ಬೆಟಗೇರಿ ಶಹರ ಅಧ್ಯಕ್ಷ ಮೈನುದ್ದಿನ್ ಬಿಜಾಪೂರ, ತಾಲೂಕಾ ಘಟಕಗಳ ಅಪ್ಪಸಾಬ, ಬಾಬಾಜಾನ್, ಮೌಲಾಸಾಬ ನದಾಫ, ದಾವಲಸಾಬ, ರಾಜೇಸಾಬ ನರಗುಂದ, ರಮಜಾನಸಾಬ ನದಾಫ ತಮ್ಮ ಅಭಿಪ್ರಾಯ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸಲೀಮ್ ನಾಗ್ತೇ, ಶಹಾಬುದ್ದಿನ್ ನೂರಾಬಾಷ, ಇಮಾಮಸಾಬ ಸೂಡಿ, ಹೆಚ್.ಆರ್. ನದಾಫ, ಶರೀಫಸಾಬ ಮಾಸ್ಟರ್, ಯಮನೂರಸಾಬ ನದಾಫ, ತಾಜಬಿ ಬಿ ನದಾಫ, ರಾಜಭಕ್ಷಿ ಹರ್ಲಾಪೂರ, ಶೌಕತಅಲಿ ಎಂ.ಅಣ್ಣಿಗೇರಿ, ಹುಸೇನಸಾಬ ನದಾಫ, ಕೆ.ಎಫ್ (ರಬ್ಬಾನಿ) ಹುಲಕೋಟಿ, ರಾಜೇಸಾಬ ಅಣ್ಣಿಗೇರಿ, ಶಾಬುದ್ದಿನ್ ಟೋಪಿವಾಲೆ, ದಾವಲ ಚಿಂಚಲಿ, ಟೀಪುಸಾಬ ನದಾಫ, ಆಯ್.ಎಮ್. ನದಾಫ, ಚಂದ್ರಶೇಖರ, ಮುದ್ದಾಬಳ್ಳಿ, ಸಲಮಾ, ಫರಿದಾಬೇಗಂ ಎಂ.ನದಾಫ, ಹಸೇನಾ ಬೇಗಂ ಸಿದ್ದಾಪೂರ, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಬಾಬಾಜಾನವರು ಕುರಾನ್ ಪಠಣ ಮಾಡಿದರು. ಗದಗ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ನದಾಫ ಸ್ವಾಗತಿಸಿ ವಂದಿಸಿದರು.