ಗದಗ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಾತಾವರಣ ಪ್ರಕ್ಷ್ಯಬ್ಧಗೊಂಡಿದೆ. ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕೋಮುಗಲಭೆ ಸಂಭವಿಸಿತ್ತು.
Advertisement
ಈ ನಡುವೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಯುವಕರಿಂದ ಗಣೇಶನ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆಯಿಂದ ಗಣೇಶನ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ.
ಶ್ರೀ ಗಣೇಶ್ವರ ಹಾಗೂ ಸ್ನೇಹ ಬಳಗದಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿದ್ದರು. ಅದಲ್ಲದೆ ಯುವಕರು ದರ್ಗಾ ಮುಂದೆ ಟಿಪ್ಪು ಸುಲ್ತಾನ್ ಸಾಂಗ್ ಹಾಕಿ ಡ್ಯಾನ್ಸ್ ಮಾಡಿದರು.
11ನೇ ದಿನದೊಂದು ಗ್ರಾಮದಲ್ಲಿ ಭವ್ಯವಾದ ಮೆರವಣಿಗೆ ಮಾಡಿ, ಜೊತೆಗೆ ಸಕತ್ ಡ್ಯಾನ್ಸ್ ಕೂಡ ಮಾಡಿ ಯುವಕರು ಗಣೇಶನ ವಿಸರ್ಜನೆ ಮಾಡಿದರು.