HomeGadag Newsಗದಗ ಪತ್ರಕರ್ತರ ಸಂಘದ ಚುನಾವಣೆ: ರಾಜು ಹೆಬ್ಬಳ್ಳಿ ಮತ್ತೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ!

ಗದಗ ಪತ್ರಕರ್ತರ ಸಂಘದ ಚುನಾವಣೆ: ರಾಜು ಹೆಬ್ಬಳ್ಳಿ ಮತ್ತೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಕರ್ತರ ಪ್ರತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ 2025-2028ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜು ಎಂ. ಹೆಬ್ಬಳ್ಳಿ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.\

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ರಾಮಣ್ಣ ವಗ್ಗಿ (ಅವಿರೋಧ), ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಕಾರ್ಯದರ್ಶಿಯಾಗಿ ಬನ್ನೇಶ ಕುಲಕರ್ಣಿ, ಚಂದ್ರಶೇಖರ ಕುಸ್ಲಾಪುರ, ಸಂಗಪ್ಪ ವ್ಯಾಪಾರಿ, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಭುಸ್ವಾಮಿ ಅರವಟಗಿಮಠ, ಅನಿಲ ತೆಂಬದಮನಿ, ವಿರೂಪಾಕ್ಷಪ್ಪ ಕಣವಿ ಚುನಾಯಿತರಾಗಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆನಂದಯ್ಯ ವಿರಕ್ತಮಠ, ರುದ್ರಗೌಡ ಪಾಟೀಲ, ಮಹಾಲಿಂಗಯ್ಯ ಹಿರೇಮಠ, ಸಂತೋಷಕುಮಾರ ಮುರಡಿ, ವೆಂಕಟೇಶ ಇಮರಾಪೂರ, ಗಿರೀಶ ಕಮ್ಮಾರ, ಮಂಜುನಾಥ ಪತ್ತಾರ, ಮಲ್ಲಪ್ಪ ಕಳಸಾಪೂರ, ಸಂತೋಷ ಕೊಣ್ಣೂರ, ಶಿವಕುಮಾರ ಶಶಿಮಠ, ನಿಂಗಪ್ಪ ಬೇವಿನಕಟ್ಟಿ, ಅಜಿತಕುಮಾರ ಹೊಂಬಾಳಿ, ಮೌನೇಶ್ವರ ಬಡಿಗೇರ, ಆದರ್ಶ ಕುಲಕರ್ಣಿ, ಯಲ್ಲಪ್ಪ ತಳವಾರ ಚುನಾಯಿತರಾಗಿದ್ದಾರೆ ಎಂದು ಕಾರ್ಯನಿರತ ಗದಗ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾ ಅಧಿಕಾರಿ ಶಿವಾನಂದ ಹಿರೇಮಠ ತಿಳಿಸಿದ್ದಾರೆ.

ಯಾರಿಗೆ ಎಷ್ಟು ಮತ?

ಜಿಲ್ಲಾ ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ – 91, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ – 111, ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ – 106, ಜಿಲ್ಲಾ ಕಾರ್ಯದರ್ಶಿಗಳಾದ ಬನ್ನೇಶ ಕುಲಕರ್ಣಿ – 104, ಚಂದ್ರಶೇಖರ ಕುಸ್ಲಾಪುರ – 92, ಸಂಗಪ್ಪ ವ್ಯಾಪಾರಿ – 87, ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ – 135, ವಿರೂಪಾಕ್ಷಪ್ಪ ಕಣವಿ – 129, ಅನಿಲ ತೆಂಬದಮನಿ – 121, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಆನಂದಯ್ಯ ವಿರಕ್ತಮಠ – 125, ರುದ್ರಗೌಡ ಪಾಟೀಲ – 122, ಮಹಾಲಿಂಗಯ್ಯ ಹಿರೇಮಠ – 118, ಸಂತೋಷಕುಮಾರ ಮುರಡಿ – 116, ವೆಂಕಟೇಶ ಇಮರಾಪೂರ – 110, ಗಿರೀಶ ಕಮ್ಮಾರ – 107, ಮಂಜುನಾಥ ಪತ್ತಾರ – 107, ಮಲ್ಲಪ್ಪ ಕಳಸಾಪೂರ – 105, ಸಂತೋಷ ಕೊಣ್ಣೂರ – 104, ಶಿವಕುಮಾರ ಶಶಿಮಠ – 104, ನಿಂಗಪ್ಪ ಬೇವಿನಕಟ್ಟಿ – 97, ಅಜಿತಕುಮಾರ ಹೊಂಬಾಳಿ – 95, ಮೌನೇಶ್ವರ ಬಡಿಗೇರ – 95, ಆದರ್ಶ ಕುಲಕರ್ಣಿ – 90, ಯಲ್ಲಪ್ಪ ತಳವಾರ – 86 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಶೇ. 100ರಷ್ಟು ಮತದಾನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಿವಿಧ ಜಿಲ್ಲೆಗಳಲ್ಲಿ ನ. 9ರಂದು ಏಕಕಾಲಕ್ಕೆ ಚುನಾವಣೆ ನಡೆದಿದ್ದು, ಚುನಾವಣೆ ನಡೆದ ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯಲ್ಲಿ ಶೇ. 100ರಷ್ಟು ಮತದಾನ ನಡೆದು ಗಮನ ಸೆಳೆದಿದೆ. ಅಲ್ಲದೇ, ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಹಿರೇಮಠ ಅವರ ನೇತೃತ್ವದಲ್ಲಿ ಗದುಗಿನ ಮತಕೇಂದ್ರ, ಸಿದ್ಧತೆ ಹಾಗೂ ವ್ಯವಸ್ಥೆ ರಾಜ್ಯದಲ್ಲಿಯೇ ಒಂದು ಮಾದರಿ ಮತಗಟ್ಟೆ ಆಗಿ ಬಿಂಬಿತವಾಗಿದ್ದು ಮತ್ತೊಂದು ವಿಶೇಷ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!