ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಸುದರ್ಶನ ಚಕ್ರ ಯುವ ಮಂಡಳ, ಹಿಂದೂ ಮಹಾ ಗಣಪತಿ ಗದಗ ಜಿಲ್ಲಾ ಸಂಘಟನೆಗಳಿಂದ ಗದಗ ಕಾಟನ್ ಮಾರ್ಕೆಟ್ ರಸ್ತೆಯಲ್ಲಿ ಪ್ರತಿಷ್ಠಾಪಿಸಲ್ಪಡುವ ಸಾರ್ವಜನಿಕ ಗಜಾನನೋತ್ಸವ ಮಂಟಪಕ್ಕೆ ಭಗವಾ ಧ್ವಜಾರೋಹಣವು ಬುಧವಾರ ಜರುಗಿತು.
ಈ ವರ್ಷದ ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಯುವ ಧುರೀಣ ಎಸ್.ಎಚ್. ಶಿವನಗೌಡರ ಹಾಗೂ ಅಧ್ಯಕ್ಷ ಸುಧೀರ ಕಾಟೀಗರ ಅವರು ಭಗವಾ ಧ್ವಜಾರೋಹಣ ನೆರವೇರಿಸಿ ಗಜಾನನೋತ್ಸವ ಕಾರ್ಯಕಲಾಪಗಳಿಗೆ ಚಾಲನೆ ನೀಡಿದರು.
ಮಂಡಳದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಹಬೀಬ ಧಾರ್ಮಿಕ ಪೂಜಾ ಕೈಂಕರ್ಯ ಪೂರೈಸಿದರು. ಈ ಸಂದರ್ಭದಲ್ಲಿ ಕಾಂತಿಲಾಲ ಬನ್ಸಾಲಿ, ರವಿ ಮಾಳೇಕೊಪ್ಪಮಠ, ಸುರೇಶ ಮೇದಾರ, ಸುರೇಶ ಅಬ್ಬಿಗೇರಿ, ಬಸವರಾಜ ದೇಗುಲ, ಅಶ್ವಿನಿ ಜಗತಾಪ, ವಂದನಾ ವೇರ್ಣೆಕರ, ರಂಜನಾ ಕೋಟಿ, ಲತಾ ಮುತ್ತಿನಪೆಂಡಿಮಠ, ರತ್ನಾ ಕುರಗೋಡ, ಅನಸೂಯಾ ಸಿರೇಗಾರ ಸೇರಿದಂತೆ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement